ವೆಂಕಯ್ಯ ನಾಯ್ಡು ರಾಜೀನಾಮೆ; ತೋಮರ್ ನಗರಾಭಿವೃದ್ಧಿ , ಸ್ಮೃತಿಗೆ ವಾರ್ತಾ ಖಾತೆ

Update: 2017-07-18 07:21 GMT

ಹೊಸದಿಲ್ಲಿ, ಜು.18: ಉಪರಾಷ್ಟ್ರಪತಿ ಸ್ಥಾನಕ್ಕೆ ಎನ್ ಡಿಎ ಅಭ್ಯರ್ಥಿಯಾಗಿರುವ ವೆಂಕಯ್ಯ ನಾಯ್ಡು ಕೇಂದ್ರ ಸಚಿವ  ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಅವರ ಕೈಯಲ್ಲಿದ್ದ ನಗರಾಭಿವೃದ್ಧಿ ಖಾತೆ ಎನ್ ಎಸ್ ತೋಮರ್ ಗೆ ಮತ್ತು ವಾರ್ತಾ ಮತ್ತು ಪ್ರಚಾರ ಖಾತೆ  ಸ್ಮೃತಿ ಇರಾನಿಗೆ ನೀಡಲಾಗಿದೆ.

ಉಪರಾಷ್ಟ್ರಪತಿ  ಚುನಾವಣೆಗೆ ಎನ್ ಡಿಎ ಅಭ್ಯರ್ಥಿಯಾಗಿ ಇಂದು ಬೆಳಗ್ಗೆ ನಾಮಪತ್ರ ಸಲ್ಲಿಸಿರುವ ವೆಂಕಯ್ಯ ನಾಯ್ಡು  ಅವರು ಇದಕ್ಕೂ ಮೊದಲು ಕೇಂದ್ರ ಸಚಿವ  ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಅವರ ರಾಜೀನಾಮೆ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ  ಮತ್ತು ಪಂಚಾಯತ್ ರಾಜ್ ಸಚಿವ  ನರೇಂದ್ರ ಸಿಂಗ್ ತೋಮರ್ ಗೆ ಹೆಚ್ಚುವರಿಯಾಗಿ ನಗರಾಭಿವೃದ್ಧಿ ಖಾತೆಯನ್ನು ನೀಡಲಾಗಿದೆ.

ವೆಂಕಯ್ಯ ನಾಯ್ಡು ನೋಡಿಕೊಳ್ಳುತ್ತಿದ್ದ  ವಾರ್ತಾ ಮತ್ತು ಪ್ರಚಾರ ಖಾತೆಯನ್ನು ಜವಳಿ ಸಚಿವೆ ಸ್ಮೃತಿ ಇರಾನಿಗೆ  ಪ್ರಧಾನ ಮಂತ್ರಿ ನರೇಂದ್ರ ಮೋದಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News