ವಿದೇಶ ಪ್ರವಾಸ ರದ್ದು ಮಾಡಲು ನಟಿ ಮಂಜು ವಾರಿಯರ್ ಗೆ ಪೊಲೀಸರ ಸೂಚನೆ

Update: 2017-07-21 11:16 GMT

ಕೊಚ್ಚಿ,ಜು.21: ನಟಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಸಾಕ್ಷ್ಯಪಡೆಯಲಾಗುತ್ತದೆ ಎನ್ನುವ ಸೂಚನೆಯ ಹಿನ್ನೆಲೆಯಲ್ಲಿ ದಿಲೀಪ್‍ರ ಮಾಜಿ ಪತ್ನಿ ಹಾಗೂ ನಟಿ ಮಂಜು ವಾರಿಯರ್ ವಿದೇಶ ಪ್ರವಾಸವನ್ನು ರದ್ದುಪಡಿಸಬೇಕೆಂದು  ಪ್ರಕರಣದ  ತನಿಖಾ ತಂಡ ಸೂಚನೆ ನೀಡಿದೆ.  ಸಂಚು ನಡೆಸಿದ ಪ್ರಕರಣದಲ್ಲಿ ಬಂಧನಕ್ಕೊಳಗಾದ ದಿಲೀಪ್‍ರ ಮೊದಲ ಪತ್ನಿಯಿಂದ ಕೆಲವು ನಿರ್ಣಾಯಕ ವಿವರಗಳು ಸಿಗಬಹುದೆಂದು ತನಿಖಾ ತಂಡ ನಿರೀಕ್ಷಿಸಿದೆ.

 ಮಂಜು ವಾರ್ಯರಿಂದ ಸಾಕ್ಷ್ಯ ಪಡೆಯುವ ಕ್ರಮದ ಭಾಗವಾಗಿ ವಿದೇಶ  ಪ್ರವಾಸವನ್ನು  ರದ್ದುಗೊಳಿಸಲು ಪೊಲೀಸರು ಸೂಚಿಸಿದ್ದಾರೆ ಎಂದು ಸೂಚನೆಗಳು ಲಭಿಸಿವೆ.

 ಮುಂದಿನ ವಾರ ಚಿಕಾಗೊ ಮತ್ತು ನ್ಯೂಯಾರ್ಕ್‍ನಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಂಜು ತೆರಳಬೇಕಾಗಿತ್ತು. ಪೊಲೀಸರ ಸೂಚನೆ ಪ್ರಕಾರ ಎರಡು ಕಾರ್ಯಕ್ರಮಗಳನ್ನು ಮಂಜು ತಪ್ಪಿಸಿಕೊಳ್ಳಬೇಕಾಗುತ್ತದೆ. ಆದರೆ, ತನಿಖಾಧಿಕಾರಿಗಳು ಇದನ್ನು ಅಧಿಕೃತವಾಗಿ ದೃಢಪಡಿಸಿಲ್ಲ. ಚಿಕಾಗೊ ಮತ್ತುನ್ಯೂಯಾರ್ಕ್ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಾಧ್ಯತೆಗಳಿಲ್ಲ ಎಂದು ಮಂಜು ವಾರಿಯರ್ರ ನಿಕಟ ಮೂಲಗಳು ತಿಳಿಸಿವೆ.

ಆದರೆ, ಪೊಲೀಸರು ಸೂಚನೆ ಪ್ರಕಾರ ಪ್ರವಾಸ ರದ್ದುಪಡಿಸಿಲ್ಲ. ಸಿನೆಮಾ ಶೂಟಿಂಗ್‍ನ ನಿಬಿಡತೆಯಿಂದ ಪ್ರವಾಸ ರದ್ದುಪಡಿಸಲಾಗಿದೆ. ಪೊಲೀಸರು  ಪ್ರವಾಸ ರದ್ದುಪಡಿಸಲು ಹೇಳಿಲ್ಲ ಎಂದು ಮಂಜು ವಾರಿಯರ್ರ ನಿಕಟಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News