'ಅಜಾತ ಶತ್ರು ' ಅಂತಿಮ ದರ್ಶನಕ್ಕೆ ಜನಸಾಗರ

Update: 2017-07-28 06:17 GMT

ಬೆಂಗಳೂರು, ಜು.28: ಗುರುವಾರ ಬೆಳಗ್ಗೆ  ಹೃದಯಾಘಾತದಿಂದ ನಿಧನರಾದ ಮಾಜಿ ಮುಖ್ಯ ಮಂತ್ರಿ  ಧರಂ  ಸಿಂಗ್​ ಅವರ ಪಾರ್ಥಿವ ಶರೀರವನ್ನು  ಅಂತಿಮ  ದರ್ಶನಕ್ಕೆ ಕಲಬುರಗಿಯ ಎನ್ ವಿ ಶಾಲಾ ಮೈದಾನದಲ್ಲಿ ಇರಿಸಲಾಗಿದ್ದು, ಅಗಲಿದ ನಾಯಕನ ಅಂತಿಮ ದರ್ಶನಕ್ಕೆ ಜನಸಾಗರ ಕಂಡು ಬಂದಿದೆ.

ಲೋಕಸಭೆಯ ವಿಪಕ್ಷ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಗಲಿದ ಆಪ್ತ ಮಿತ್ರನ ಅಂತಿಮ ದರ್ಶನದ ವೇಳೆ ಅವರನ್ನು  ಅಪ್ಪಿಕೊಂಡು ಧರಂ ಸಿಂಗ್ ಪುತ್ರರಾದ ಅಜಯ್ ಸಿಂಗ್ ಮತ್ತು  ವಿಜಯ್ ಸಿಂಗ್ ಕಣ್ಣೀರಿಟ್ಟರು.

 ಅಂತಿಮ ದರ್ಶನ ಮುಗಿದ ಬಳಿಕ ಇಂದು ಸಂಜೆ ನಾಲ್ಕು ಗಂಟೆಗೆ ಹುಟ್ಟೂರಾದ ನೆಲೋಗಿಯಲ್ಲಿ ಧರ್ಮ ಸಿಂಗ್​ ಅವರ ಅಂತ್ಯಕ್ರಿಯೆ ನೆರವೇರಲಿದ್ದು, ರಜಪೂತ ಸಂಪ್ರದಾಯದ ವಿಧಿವಿಧಾನದಂತೆ ಅಂತ್ಯಕ್ರಿಯೆ  ನಡೆಯಲಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News