ಧರಂಸಿಂಗ್ ನಿಧನ: ಸಂತಾಪ

Update: 2017-07-28 11:10 GMT

ಚಿಕ್ಕಮಗಳೂರು, ಜು.28: ಹೃದಯಾಘಾತದಿಂದ ವಿಧಿವಶರಾದ ಮಾಜಿ ಮುಖ್ಯಂತ್ರಿ ಧರಂಸಿಂಗ್ ನಿಧನಕ್ಕೆ ರಾಜೀವ್‌ಗಾಂಧಿ ಪಂಚಾಯತ್‌ರಾಜ್ ಸಂಘಟನೆ ರಾಜ್ಯ ಸಂಚಾಲಕ ಬಿ.ಎಂ.ಸಂದೀಪ್ ಪತ್ರಿಕಾ ಹೇಳಿಕೆ ಮೂಲಕ ಸಂತಾಪ ಸೂಚಿಸಿದ್ದಾರೆ.

ಸರಳ ಸಜ್ಜನಿಕೆ ವ್ಯಕ್ತಿತ್ವದ ರಾಜಕೀಯ ಅಜಾತಶತ್ರುವಾಗಿ ಸೋಲಿಲ್ಲದ ಸರದಾರನಂತೆ ಜನಮನಗೆದ್ದ ಅಪರೂಪದ ನಾಯಕ ಧರಂಸಿಂಗ್ ರವರ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಆತ್ಮಕ್ಕೆ ಶಾಂತಿ ಕೋರಿ ಅವರ ಕುಟುಂಬಕ್ಕೆ ದುಖ: ಭರಿಸುವ ಶಕ್ತಿ ದೇವರು ಕರುಣಿಸಲಿ ಎಂದು ಹೇಳಿದ್ದಾರೆ.

ಧರಂಸಿಂಗ್ ಪುತ್ರ ವಿಜಯ್‌ಸಿಂಗ್ ಎಂಎಲ್ಸಿ ಯಾಗಿ ಹಾಗೂ ರಾಜೀವ್‌ಗಾಂಧಿ ಪಂಚಾಯತ್‌ರಾಜ್ ಸಂಘಟನೆ ಜಿಲ್ಲಾ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಾ ಜನಸೇವೆಯಲ್ಲಿ ತೊಡಗಿದ್ದರು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News