ಅಂದರ್-ಬಾಹರ್: 9 ಮಂದಿ ಬಂಧನ

Update: 2017-07-28 11:36 GMT

ಚಿಕ್ಕಮಗಳೂರು, ಜು.28: ಅಕ್ರಮ ಜೂಜಾಟದಲ್ಲಿ ತೊಡಗಿದ್ದ 9 ಮಂದಿ ಆರೋಪಿಗಳನ್ನು ಅಜ್ಜಂಪುರ ಪೊಲೀಸರು ದಸ್ತಗಿರಿ ಮಾಡಿದ್ದಾರೆ.

ಅಜ್ಜಂಪುರದ ಗಿರೀಶ್ ಕುಮಾರ್, ಶಿವಕುಮಾರ್, ರವಿ, ರಘು, ಗೌತಮ್, ಸ್ವಾಮಿ, ಶಂಕರ್, ಆಂಜನಪ್ಪ, ರಮೇಶ್ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ಸೊಲ್ಲಾಪುರದ ಗಂಗಮ್ಮ ಹಳ್ಳದ ಸೇತುವೆ ಬಳಿ ಅಕ್ರಮ ಅಂದರ್ ಬಾಹರ್ ಹೆಸರಿನ ಜೂಜಾಟದಲ್ಲಿ ತೊಡಗಿದ್ದರು.

ಈ ಸಮಯದಲ್ಲಿ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲಿಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 2500 ರೂ.ಗಳ ನಗದನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News