ಅತ್ತಿಗೆರೆ ಪ್ರಾಥಮಿಕ ಶಾಲೆಯಲ್ಲಿ 71ನೇ ಸ್ವಾತಂತ್ರ್ಯ ದಿನಾಚರಣೆ
ಬಣಕಲ್, ಆ.16: ಕೊಟ್ಟಿಗೆಹಾರ ಬಳಿಯ ಅತ್ತಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ 71ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾಜಿ ಯೋಧರಾದ ಕೆ.ಎಲ್ ಜಯಂತ್ ಮತ್ತು ವಲೇರಿಯನ್ ಡಿಸೋಜರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅತ್ತಿಗೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮಿತಿಯ ನೂತನ ಅಧ್ಯಕ್ಷ ಕಾಂತರಾಜು ಅಧ್ಯಕ್ಷತೆ ವಹಿಸಿದ್ದರು. ಮಾಜಿ ತರುವೆ ಗ್ರಾಪಂ ಅಧ್ಯಕ್ಷ ಬಿ.ಎಂ.ಭರತ್, ಮಾಜಿ ಶಾಲಾ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿದರು. ವಿದ್ಯಾರ್ಥಿಗಳಾದ ಸಿರಿ, ಮನವಿ, ರಕ್ಷಿತ, ಬಬಿತ, ಸುಪ್ರೀಯ, ಸ್ವರೂಪ್ ಮತ್ತು ತಂಡದವರಿಂದ ದೇಶಭಕ್ತಿಗೀತೆಗಳ ನೃತ್ಯ ಹಾಗೂ ಪಿರಮಿಡ್ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ತರುವೆ ಗ್ರಾಪಂ ಅಧ್ಯಕ್ಷೆ ರವಿಕಲಾಪೈ, ಸದಸ್ಯರಾದ ಟಿ.ಎಂ.ಮಹೇಶ್, ಲಲಿತ, ಪದ್ಮಾ, ಶಾಲಾ ಸಮಿತಿ ಮಾಜಿ ಅಧ್ಯಕ್ಷ ರಮೇಶ್, ಡಿ.ಜೆ.ಸುರೇಂದ್ರ , ಅರಣ್ಯ ಸಿಬ್ಬಂದಿ ಸುಂದರೇಶ್ಗೌಡ, ಪದ್ಮಾವತಿ, ಹಿರಿಯರಾದ ಎ.ಎಸ್.ಸೋಮಯ್ಯ, ವರ್ತಕರ ಸಂಘದ ಕಾರ್ಯಧರ್ಶಿ ವೇಣುಗೋಪಾಲ್ ಪೈ, ಮುಖ್ಯ ಶಿಕ್ಷಕ ಡಿ.ರಾಜು, ಶಿಕ್ಷಕರಾದ ಕುಮಾರ್, ಕವಿತ, ಮೈಮುನಾಭಿ, ಜೆಸ್ಸಿಂತಾ ಉಪಸ್ಥಿತರಿದ್ದರು.