ಎಲೈಟ್ ಪಿಯು ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ

Update: 2017-08-16 11:04 GMT

ಚಿಕ್ಕಮಗಳೂರು, ಆ.16:ಇತಿಹಾಸ ಮರೆತವರು ಇತಿಹಾಸ ಸೃಷ್ಠಿಸಲಾರದು ಹಾಗಾಗಿ ಈ ಸನ್ನಿವೇಶದಲ್ಲಿ ಸ್ವಾತಂತ್ರ್ಯಕ್ಕಾಗಿ ದುಡಿದ ಪ್ರತಿಯೊಬ್ಬ ಮಹನೀಯರನ್ನು ಸ್ಮರಿಸುತ್ತಾ ಅವರ ಕನಸಿನಂತೆ ದೇಶವನ್ನು ಬೆಳೆಸಬೇಕು ಎಂದು ಜ್ಯೋತಿ ನಗರ ಎಲೈಟ್ ಪಿಯು ಕಾಲೇಜು ವ್ಯವಸ್ಥಾಪಕ ಪ್ರದೀಪ್ ಹೇಳಿದರು.

ಅವರು ನಗರದ ಜ್ಯೋತಿ ನಗರ ಎಲೈಟ್ ಪಿಯು ಕಾಲೇಜು ಆವರಣದಲ್ಲಿ 71ನೇ ಸ್ವಾತಂತ್ರ್ಯ ದಿನಾಚರಣೆಯ ವೇಳೆ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜ್ ಪ್ರಾಂಶುಪಾಲ ಪರಮೇಶ್ವರಪ್ಪ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂತೋಷ್ ಹಾಗೂ ಸಂದೀಪ್ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಯೋಗೀಶ್ ಸ್ವಾಗತಿಸಿದರೆ, ಇಂಗ್ಲೀಷ್ ಉಪನ್ಯಾಸಕ ಚಂದ್ರಶೇಖರ್ ವಂದಿಸಿದರು. ಕುಮಾರಿ ಮಾನಸ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News