ಬದ್ರಿಯಾ ಮಸೀದಿಯಲ್ಲಿ ಸ್ವಾತಂತ್ರ್ಯ

Update: 2017-08-16 11:06 GMT

ಚಿಕ್ಕಮಗಳೂರು, ಆ.16:  ಅಲ್ ಬದ್ರಿಯಾ ಮಸ್ಜಿದ್, ಎಸ್‍ಎಸ್‍ಎಫ್ ಹಾಗೂ ಎಸ್‍ಬಿಎಸ್ ಸಹಯೋಗದೊಂದಿಗೆ ನಗರದ ಬದ್ರಿಯಾ ಮಸೀದಿ ಮುಂಭಾಗದಲ್ಲಿ 71ನೇ ಸ್ವಾತಂತ್ರ್ಯೋತ್ಸವವನ್ನು ಅದ್ಧುರಿಯಾಗಿ ಆಚರಿಸಲಾಯಿತು.

  ಮದರಸ ಮುಖ್ಯೋಪಾಧ್ಯಯ ಇಬ್ರಾಹಿಂ ಸಅದಿ ದುಆ ನರವೇರಿಸದರು, ಮಸೀದಿ ಗೌರವಾಧ್ಯಕ್ಷ ಖಲಂದರ್ ಹಾಜಿ ಧ್ವಜಾರೋಹಣ ಕಾರ್ಯ ನೆರವೇರಿಸಿದರು. ಮಸೀದಿ ಖತೀಬರಾದ ಹುಸೈನ್ ಸಅದಿ ಹೊಸ್ಮಾರ್ ಮಾತನಾಡಿದರು. ಸಿಹಿ ವಿತರಿಸಲಾಯಿತು.

  ಕಾರ್ಯಕ್ರಮದಲ್ಲಿ ಜಮಾಅತ್ ಸಮಿತಿ ಪ್ರ.ಕಾರ್ಯದರ್ಶಿ ಆಲ್ತಾಫ್ ರಹ್ಮಾನ್, ಕೋಶಾಧಿಕಾರಿ ಅಝೀಝ್ ಕರಾವಳಿ, ಅಧ್ಯಾಪಕರಾದ ರಫೀಖ್ ಸಖಾಫಿ, ಖಲಂದರ್ ಸಖಾಫಿ, ಇಸ್ಮಾಯಿಲ್ ಲತೀಫಿ, ಖಾದರ್ ಮುಸ್ಲಿಯಾರ್, ಎಸ್‍ಎಸ್‍ಎಫ್ ಹಾಗೂ ಎಸ್‍ಬಿಎಸ್ ಕಾರ್ಯಕರ್ತರು ಮತ್ತು ಪುಟಾಣಿ ಮಕ್ಕಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News