ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಕ್ತದಾನ ಶಿಬಿರ

Update: 2017-08-16 11:12 GMT

ಮೂಡಿಗೆರೆ, ಆ.16: 71 ನೆ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪೀಸ್ ಅಂಡ್ ಅವೆರ್ನೆಸ್ ಟ್ರಸ್ಟಿನಿಂದ ಮೂಡಿಗೆರೆಯ ಸರಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ನಡೆಯಿತು.

 ಶಿಬಿರದ ಅಧ್ಯಕ್ಷತೆಯನ್ನು ಮಲ್ನಾಡ್ ಮುಸ್ಲಿಂ ವೇಧಿಕೆ ಮುಖಂಡ ಎ.ಸಿ.ಅಯ್ಯೂಬ್ ಹಾಜಿಂ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸುಮಾರು 62 ಮಂದಿ ಶಿಭಿರಾರ್ಥಿಗಳು ರಕ್ತದಾನ ಮಾಡಿದರು.

  ಕಾರ್ಯಕ್ರಮದ ವೇದಿಕೆಯಲ್ಲಿ ಪೀಸ್ ಅಂಡ್ ಅವೆರ್ನೆಸ್ ಟ್ರಸ್ಟಿನ ಸಂಸ್ಥಾಪಕ ಅಲ್ತಾಫ್ ಬಿಳಗುಳ, ಸಮಾಜಸೇವಕ ಅಬ್ದುಲ್ ರಹಿಮಾನ್, ಫಿಶ್ ಮೋಣು, ರಕ್ತನಿಧಿಯ ಮುಖ್ಯಸ್ಥ ಡಾ.ಮುರಳಿಧರ್, ವೈಧ್ಯಾಧಿಕಾರಿ ಡಾ.ಯೋಗೇಶ್, ಶುಶ್ರೂಷಕಿ ವರಮಹಾಲಕ್ಷ್ಮಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News