ಹನೂರು ವಲಯದ ನೂತನ ಶಿಕ್ಷಣಾಧಿಕಾರಿಗೆ ಸನ್ಮಾನ

Update: 2017-08-16 11:26 GMT

ಹನೂರು,ಆ.16 : ಹನೂರು ವಲಯದ ನೂತನ ಶಿಕ್ಷಣಾಧಿಕಾರಿಗಳಾಗಿ ಆಯ್ಕೆಯಾದ ಕೆ.ಮಹದೇವಪ್ಪರವರಿಗೆ  ಪಟ್ಟಣ ಪಂಚಾಯತ್ ಅಧ್ಯಕ್ಷೆಯಾದ ಮಮತಾ ಮಹದೇವ್ ರವರು ಅತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.

ನಂತರ ಮಾತನಾಡಿದ ಅವರು ಈ ಹಿಂದೆ ಇದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳು ವಲಯದ ಎಲ್ಲಾ ಶಿಕ್ಷಕರಿಗೆ ಉತ್ತಮ ಮಾರ್ಗದರ್ಶಕರಾಗಿ ಹನೂರು ಶೈಕ್ಷಣಿಕವಲಯದ ಪ್ರಗತಿಗೆ ಶ್ರಮಿಸಿದರು. ಹಾಗೆಯೇ ಕಳೆದ ಎರಡು ವರ್ಷಗಳಿಂದ  ಎಸ್‍ಎಸ್‍ಎಲ್‍ಸಿ  ಪರೀಕ್ಷೆಯಲ್ಲಿ  ಹನೂರು ಶೈಕ್ಷಣಿಕ ವಲಯವು ಚಾಮರಾಜನಗರ ಜಿಲ್ಲೆಯಲ್ಲಿ  ಪ್ರಥಮ  ಸ್ಥಾನದಲ್ಲಿದ್ದು, ರಾಜ್ಯದಲ್ಲ್ಲೀಯೇ ಹನೂರು ವಲಯವು ಎಂಟನೇ ಸ್ಥಾನದಲ್ಲಿದೆ. ಹನೂರು ರಾಜ್ಯದಲ್ಲಿ ನೂತನವಾಗಿ ತಾಲೂಕು ಆಗಿರುವುದ್ದರಿಂದ ಮುಂದಿನ 2017-18ಸಾಲಿನ ಎಸ್‍ಎಸ್‍ಎಲ್‍ಸಿ  ಪರೀಕ್ಷೆಯಲ್ಲಿ ಇನ್ನು ಹೆಚ್ಚಿನ ಪಲಿತಾಂಶ ಹನೂರು ವಲಯಕ್ಕೆ ಬರುವುದ್ದಕ್ಕೆ .ಮಕ್ಕಳಿಗೆ ಇನ್ನು ಹೆಚ್ಚಿನ ಗುಣಮಟ್ಟದ ಶಿಕ್ಷಣ ದೊರಕುವಂತೆ ಕಾರ್ಯ ಪ್ರವೃತ್ತರಾಗಲು ತಿಳಿಸಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ನ ನಾಮನೀರ್ದೆಶಕ ಸದಸ್ಯರಾದ ನಾಗಣ್ಣ ಅಧಿಕಾರಿಗಳು ಅನೇಕ ಮುಖಂಡರುಗಳು ಭಾಗವಹಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News