ಸಾಗರ: ಕಾಣೆಯಾಗಿದ್ದ ಬಾಲಕರ ಪತ್ತೆ

Update: 2017-08-21 11:05 GMT

ಸಾಗರ, ಆ.21: ಮನೆಯಲ್ಲಿ ಜಗಳ ಮಾಡಿಕೊಂಡು ಮನೆ ಬಿಟ್ಟು ಬಂದಿದ್ದ ಇಬ್ಬರು ಬಾಲಕರನ್ನು ಪುನಃ ಮನೆಗೆ ಸೇರಿಸುವ ಕೆಲಸವನ್ನು ಭಾನುವಾರ ನಗರಸಭೆ ಸದಸ್ಯೆ ಪರಿಮಳ ಮತ್ತು ಜನ ಜೀವನ್ ಜಾಗೃತಾ ವೇದಿಕೆ ಅಧ್ಯಕ್ಷ ಎಂ.ಎಸ್.ಶಶಿಕಾಂತ್ ಮಾಡಿದ್ದಾರೆ.

ಶಿವಮೊಗ್ಗದ 9ನೆ ತರಗತಿ ವಿದ್ಯಾರ್ಥಿಗಳಾದ ಶ್ರೀಕಾಂತ್ ಮತ್ತು ಜಗದೀಶ್ ಎಂಬವರು ಮನೆಯಲ್ಲಿ ತಾಯಿ ಬೈಯುತ್ತಾಳೆ ಎಂಬ ಕಾರಣಕ್ಕೆ ಭಾನುವಾರ ಬೆಳಗ್ಗೆ ಮನೆ ಬಿಟ್ಟು ಆನಂದಪುರಂವರೆಗೆ ಬಸ್‍ನಲ್ಲಿ ಬಂದಿದ್ದಾರೆ. ಆನಂದಪುರಂನಿಂದ ಸಾಗರದ ಕಡೆ ಬರಲು ಹಣ ಇಲ್ಲದೆ ನಡೆದುಕೊಂಡು ಸಾಗರದವರೆಗೆ ಬಂದಿದ್ದರು.

ರಾತ್ರಿ 10-30ರ ಸುಮಾರಿಗೆ ಗಾಂಧಿನಗರದಲ್ಲಿ ಇಬ್ಬರು ಬಾಲಕರು ಅನುಮಾನಸ್ಪದವಾಗಿ ತಿರುಗುತ್ತಿದ್ದಾಗ ಅಲ್ಲಿನ ಕೆಲವು ಯುವಕರು ನಗರಸಭೆ ಸದಸ್ಯೆ ಪರಿಮಳ ಅವರಿಗೆ ಮಾಹಿತಿ ನೀಡಿದ್ದಾರೆ.

ಈ ವೇಳೆ ನಗರಸಭೆ ಸದಸ್ಯೆ ಪರಿಮಳ ಹಾಗೂ ಜನಜೀವನ್ ಜಾಗೃತ್ ವೇದಿಕೆ ಅಧ್ಯಕ್ಷ ಎಂ.ಎಸ್.ಶಶಿಕಾಂತ್ ಬಾಲಕರನ್ನು ಪತ್ತೆ ಹಚ್ಚಿ ನಗರ ಠಾಣೆಗೆ ಒಪ್ಪಿಸಿದ್ದಾರೆ. ತಕ್ಷಣ ಬಾಲಕರ ಬಳಿ ಮನೆಯವರ ಮೊಬೈಲ್ ಸಂಖ್ಯೆ ಪಡೆದು ಕರೆ ಮಾಡಿ ರಾತ್ರಿ 12-30ರ ಸುಮಾರಿಗೆ ಅವರ ಪೋಷಕರಿಗೆ ಒಪ್ಪಿಸಿದ ಘಟನೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News