ಬ್ಯಾಂಕ್ ಮುಷ್ಕರ; ವ್ಯವಹಾರ ಸಂಪೂರ್ಣ ಸ್ಥಗಿತ

Update: 2017-08-22 04:41 GMT

ಹೊಸದಿಲ್ಲಿ, ಆ.22: ಬ್ಯಾಂಕ್ ಗಳ   ವಿಲೀನ, ಖಾಸಗೀಕರಣ , ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಮುಂದಾಗಿರುವ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಬ್ಯಾಂಕ್ ನೌಕರರು ಮಂಗಳವಾರ ದೇಶಾದ್ಯಂತ  ಮುಷ್ಕರದಲ್ಲಿ  ಪಾಲ್ಗೊಂಡಿದ್ದಾರೆ.

ಬ್ಯಾಂಕ್ ನೌಕರರು ವ್ಯವಹಾರವನ್ನು ಸಂಪೂರ್ಣ ಸ್ಥಗಿತಗೊಳಿಸಿ ಮುಷ್ಕರದಲ್ಲಿ ಭಾಗಿಯಾಗಿದ್ದಾರೆ. ಇದರಿಂದಾಗಿ  ಬ್ಯಾಂಕ್ ​ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ ಆದರೆ ಖಾಸಗಿ ಬ್ಯಾಂಕುಗಳ ಸೇವೆಯಲ್ಲಿ ಯಾವುದೇ ವ್ಯತ್ಯಯ  ಉಂಟಾಗಿಲ್ಲ.

ಬೆಂಗಳೂರಿನ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಯುನೈಟೆಡ್ ಫೋರಂ ಆಫ್ ಬ್ಯಾಂಕಿಂಗ್ ಯೂನಿಯನ್ಸ್(ಯುಎಫ್ ಬಿಯು) ನೇತೃತ್ವದಲ್ಲಿ ಬ್ಯಾಂಕ್ ನೌಕರರು ಪ್ರತಿಭಟನೆ ಆರಂಭಿಸಿದ್ದಾರೆ. ಬ್ಯಾಂಕ್ ಗಳ  ಸುಧಾರಣಾ ಕ್ರಮಗಳ ಹೆಸರಿನಲ್ಲಿ ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಲು ಮತ್ತು  ಎಲ್ಲ ಬ್ಯಾಂಕ್‌ಗಳನ್ನೂ ಒಂದೇ ಬ್ಯಾಂಕಿಂಗ್ ಹೂಡಿಕೆ ಕಂಪೆನಿಯ ಅಡಿಯಲ್ಲಿ ತರಲು ಕೆಂದ್ರ ಸರಕಾರ  ಯೋಜನೆ ಹಾಕಿಕೊಂಡಿದ್ದು,  ಸರಕಾರದ ಕ್ರಮವನ್ನು ಬ್ಯಾಂಕ್ ನೌಕರರು ವಿರೋಧಿಸಿ ಮುಷ್ಕರ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News