ಕುಟುಂಬದ ಸ್ನೇಹಿತನಿಂದಲೇ ಐಟಿ ಅಧಿಕಾರಿ ಪುತ್ರ ಶರತ್ ನ ಕೊಲೆ

Update: 2017-09-22 07:11 GMT

 ಬೆಂಗಳೂರು, ಸೆ.22: ಹಣಕ್ಕಾಗಿ ಅಪಹರಣಕ್ಕೊಳಗಾಗಿದ್ದ ಐಟಿ ಅಧಿಕಾರಿ ನಿರಂಜನ್​ ಪುತ್ರ ಶರತ್ ಆತನ ಸ್ನೇಹಿತನಿಂದಲೇ ಕೊಲೆಯಾಗಿದ್ದಾರೆ.

ಕೊಲೆ ಪ್ರಕರಣ ಸಂಬಂಧ ಐವರು  ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಶಶಿ, ವಿಶಾಲ್, ವಿಕ್ಕಿ, ಶಾಂತ, ಕರ್ಣ  ಎಂಬವರು ಶರತ್ ನ್ನು ಅಪಹರಿಸಿ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 ಶರತ್ ನಿಗೆ  ಪೋಷಕರು ಹೊಸ ಬೈಕ್ ಕೊಡಿಸಿದ್ದರು. ಅದನ್ನು ಸ್ನೇಹಿತರಿಗೆ ತೋರಿಸಿ ಸ್ವೀಟ್ ಕೊಟ್ಟು ಬರುತ್ತೇನೆಂದು ಕಳೆದ 12ರಂದು ಸಾಯಂಕಾಲ 5.30ರ ಸುಮಾರಿಗೆ ಮನೆಯಿಂದ ಶರತ್ ಹೊರಟಿದ್ದ. ಆದರೆ ಅಂದು ವಾಪಾಸಾಗಿರಲಿಲ್ಲ.

 ಶರತ್ ನ್ನು  ಆತನ ಕುಟುಂಬದ ಸ್ನೇಹಿತ  ವಿಶಾಲ್  ಸೇರಿದಂತೆ ಐವರು  ಅಪಹರಿಸಿ 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಹಣಕ್ಕಾಗಿ ಬೇಡಿಕೆ ಇಟ್ಟಿದ್ದ  ಬಗ್ಗೆ  ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ , ಪೊಲೀಸರಿಗೆ ಹೆದರಿದ ಹಂತಕರು  ಶರತ್ ನ್ನು ತಾವು ಅಪಹರಿಸಿದ್ದ ಕಾರ್ ನಲ್ಲೇ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿದ್ದಾರೆ. ಬಳಿಕ ಶವವನ್ನು  ಕೆಂಗೇರಿ ಬಳಿಯ ರಾಮೋಹಳ್ಳಿ ಕೆರೆಗೆ ಎಸೆದಿದ್ದಾರೆ. ನೀರಿನಿಂದ ಬಳಿಕ ಶವವನ್ನು ಎತ್ತಿ ಅಜ್ಜೆನಹಳ್ಳಿಯಲ್ಲಿ ಗುಂಡಿ ತೆಗೆದು ಹೂತು ಹಾಕಿದ್ದರು ಎಂದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.

ಹೂತು ಹಾಕಿದ್ದ ಶರತ್ ನ ಶವವನ್ನು  ಪೊಲೀಸರು ಹೊರ ತೆಗೆದಿದ್ದಾರೆ,  ಶವ ಸಂಪೂರ್ಣ ಕೊಳೆತು ಹೋಗಿದ್ದು, ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News