ಸಿಬಿಐ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಗುರ್ಮೀತ್

Update: 2017-09-25 12:31 GMT

ಹೊಸದಿಲ್ಲಿ, ಸೆ.25: ಇಬ್ಬರು ಸಾಧ್ವಿಗಳ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ಸಿಬಿಐ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ಧ ಗುರ್ಮೀತ್ ಸಿಂಗ್ ಪಂಜಾಬ್ ಹರ್ಯಾಣ ಹೈಕೋರ್ಟ್ ಮೆಟ್ಟಿಲೇರಿದ್ದಾನೆ.

ರೋಹ್ಟಕ್ ನ ಜಿಲ್ಲಾ ಜೈಲಿನಲ್ಲಿ ಸದ್ಯ ಗುರ್ಮಿತ್ ಇದ್ದು, ತನ್ನ ಮೇಲಿನ ಆರೋಪಗಳು ಸುಳ್ಳು. ಏಕೆಂದರೆ ದೈಹಿಕ ಸಂಬಂಧಗಳಲ್ಲಿ ತೊಡಗಿಕೊಳ್ಳಲು ತಾನು ಸಮರ್ಥನಲ್ಲ ಎಂದು ಡೇರಾ ಮುಖ್ಯಸ್ಥ ಗುರ್ಮೀತ್ ಹೇಳಿದ್ದಾನೆ.

“ನಾವು ಇಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದೇವೆ. ಈ ಮೂಲಕ ಸಿಬಿಐ ನ್ಯಾಯಾಲಯದ ತೀರ್ಪನ್ನು ನಾವು ಪ್ರಶ್ನಿಸಿದ್ದೇವೆ” ಎಂದು ಪ್ರತಿವಾದಿ ವಕೀಲ ವಿಶಾಲ್ ಗರ್ಗ್ ನರ್ವಾನ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News