ಕೊಳ್ಳೇಗಾಲ: ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ
ಕೊಳ್ಳೇಗಾಲ, ಸೆ.25: ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಸೋಮವಾರ ನಡೆದ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆಯು ಶಾಸಕರಾದ ಎಸ್. ಜಯಣ್ಣ ಹಾಗೂ ಆರ್.ನರೇಂದ್ರರವರ ಸಮ್ಮುಖದಲ್ಲಿ ಜರಗಿತು.
ಅ.5ರಂದು ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಪಟ್ಟಣದ ವಸಂತಕುಮಾರಿ ಕಾಲೇಜು ಮೈದಾನದಲ್ಲಿ ಅದ್ದೂರಿಯಾಗಿ ಆಚರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಪ್ರತೀ ಕಾರ್ಯಕ್ರಮದಂತೆ ವಾಲ್ಮೀಕಿ ಜಯಂತಿಯನ್ನೂ ಅದ್ಧೂರಿಯಾಗಿ ಆಚರಿಸಲು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು. ಮುಖ್ಯ ಭಾಷಣಕಾರರೂ ಸೇರಿದಂತೆ ನಾಯಕ ಸಮುದಾಯದ ಸಾಧಕರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ನಗರಸಭೆ ಅಧ್ಯಕ್ಷ ಶಾಂತರಾಜು, ತಾಪಂ ಅಧ್ಯಕ್ಷ ರಾಜು, ಉಪಾಧ್ಯಕ್ಷೆ ಲತಾ ರಾಜಣ್ಣ, ಸದಸ್ಯರಾದ ಅರುಣ್, ಸಿದ್ದಪ್ಪಾಜಿ, ತಹಶೀಲ್ದಾರ್ ಕಾಮಾಕ್ಷಮ್ಮ, ತಾಪಂ ಇಒ ಡಾ.ದರ್ಶನ್, ಡಿವೈಎಸ್ಪಿ ಪುಟ್ಟಮಾದಯ್ಯ, ಬಿಇಒ ಶಿವಲಿಂಗಯ್ಯ, ನಾಯಕ ಸಮುದಾಯದ ಮುಕಂಡರಾದ ಚಿಕ್ಕಮಾದು, ಶಂಕರ್, ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖಾಧಿಕಾರಿ ಗಂಗಾಧರ್, ಸಮಾಜಕಲ್ಯಾಣಾಧಿಕಾರಿ ಮಂಜುಳಾ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.