“ದೇಶ ಭಕ್ತಿಯ ಬಗ್ಗೆ ನಮಗೆ ಪಾಠ ಹೇಳಲು ಬರಬೇಡಿ”
Update: 2017-10-01 08:59 GMT
ಮುಂಬೈ, ಅ.1: ಬಿಜೆಪಿ ವಿರುದ್ಧ ಟೀಕಾಪ್ರಹಾರವನ್ನು ಮುಂದುವರಿಸಿರುವ ಎಂದು ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ “ದೇಶ ಭಕ್ತಿಯ ಬಗ್ಗೆ ನಮಗೆ ಪಾಠ ಹೇಳಲು ಬರಬೇಡಿ. ನಾವು ದೇಶಭಕ್ತಿಯನ್ನು ಕಲಿಯಬೇಕಾದ ದಿನ ಇನ್ನೂ ಬಂದಿಲ್ಲ” ಎಂದು ಹೇಳಿದ್ದಾರೆ.
ಸೆಂಟ್ರಲ್ ಮುಂಬೈಯ ಶಿವಾಜಿ ಪಾರ್ಕ್ ನಲ್ಲಿ ನಡೆದ ವಾರ್ಷಿಕ ದಸರಾ ರ್ಯಾಲಿಯಲ್ಲಿ ಅವರು ಮಾತನಾಡುತ್ತಿದ್ದರು.
“ನೋಟು ಅಮಾನ್ಯ ನೀತಿಯನ್ನು ವಿರೋಧಿಸಿದವರನ್ನು ದೇಶದ್ರೋಹಿಗಳಾಗಿಯೂ ಅದನ್ನು ಬೆಂಬಲಿಸಿದವರನ್ನು ದೇಶಪ್ರೇಮಿಗಳೆಂದು ಬಿಂಬಿಸುವ ವಾತಾವರಣವೊಂದನ್ನು ಸೃಷ್ಟಿಸಲಾಗಿದೆ” ಎಂದವರು ಹೇಳಿದರು.