ಅಮಿತ್ ಶಾ ಆಡಿನ ಚರ್ಮ ಧರಿಸಿರುವ ತೋಳ: ಸಿಪಿಎಂ
Update: 2017-10-04 15:21 GMT
ತಿರುವನಂತಪುರಂ,ಅ.4: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಡಿನ ಚರ್ಮದ ಧರಿಸಿರುವ ತೋಳ ಎಂದು ಸಿಪಿಎಂನ ಕೇರಳ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಹೇಳಿದ್ದಾರೆ. ಗುಜರಾತ್ನಲ್ಲಿ ಸಾಮೂಹಿಕ ಹತ್ಯಾಕಾಂಡಕ್ಕೆ ನೇತೃತ್ವ ನೀಡಿದ ವ್ಯಕ್ತಿ ಅಮಿತ್ಶಾ ಎಂದವರು ಹೇಳಿದರು.
ಧೈರ್ಯವಿದ್ದರೆ ವೇಂಙರೆಗೆ ಬಂದು ಪಾದಯಾತ್ರೆ ನಡೆಸಿ ಅಲ್ಲಿ ನಡೆಯುತ್ತಿರುವ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ತೋರಿಸಲಿ ಎಂದು ತಾನು ಸವಾಲು ಹಾಕುತ್ತಿದ್ದೇನೆ ಎಂದು ಕೊಡಿಯೇರಿ ಬಾಲಕೃಷ್ಣನ್ ಹೇಳಿದರು.