ಮಾರಪ್ಪ ಕೊಟ್ಟಾರಿ
Update: 2017-10-07 12:32 GMT
ಬಂಟ್ವಾಳ, ಅ. 7: ಪ್ರಗತಿಪರ ಕೃಷಿಕ, ಸಜೀಪ ಮುನ್ನೂರು ನಿವಾಸಿ ಮಾರಪ್ಪ ಕೊಟ್ಟಾರಿ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೃತರು ಪತ್ನಿ, ಎಂಟು ಮಂದಿ ಪುತ್ರರನ್ನು ಅಗಲಿದ್ದಾರೆ. ಅವರು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರು.
ಗಣೇಶ ಬೀಡಿ ಗುತ್ತಿಗೆದಾರರ ಯೂನಿಯನ್ ಮಾಜಿ ಅಧ್ಯಕ್ಷ, ಸಜೀಪ ಮೂಡ ಈಶ್ವರ ಮಂಗಲ ಸದಾಶಿವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸದಸ್ಯ, ಶಾರದಾ ನಗರ ಶಾರದಾಂಬಿಕ ಭಜನ ಮಂದಿರದ ಗೌರವಾಧ್ಯಕ್ಷ, ಸಜಿಪ ಮುನ್ನೂರು, ಆಲಾಡಿ ಹಿ.ಪ್ರಾ. ಶಾಲೆಯ ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷರಾಗಿದ್ದರು.