ಕೇರಳ ಬಿಜೆಪಿಯ ಜನರಕ್ಷಾ ಯಾತ್ರೆಗೆ ಇಂದು ತೆರೆ
Update: 2017-10-17 07:28 GMT
ತಿರುವನಂತಪುರಂ,ಅ. 17: ಬಿಜೆಪಿಯ ಕೇರಳ ಘಟಕ ಅಧ್ಯಕ್ಷ ಕುಮ್ಮನಂ ರಾಜಶೇಖರನ್ ನೇತೃತ್ವದ ಜನರಕ್ಷಾಯಾತ್ರೆಗೆ ಇಂದು ತೆರೆಬೀಳಲಿದೆ. ತಿರುವನಂತಪುರಂ ಪುತ್ತರಿಕಂಡಂ ಮೈದಾನದಲ್ಲಿಸಮಾರೋಪ ಸಮಾರಂಭ ನಡೆಯಲಿದ್ದು, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ಶಾ ಭಾಗವಹಿಸಲಿದ್ದಾರೆ. ಪಯ್ಯನ್ನೂರಿನಿಂದ ಆರಂಭಗೊಂಡಿದ್ದ ಜನರಕ್ಷಾ ಯಾತ್ರೆ ಕೇರಳಾದ್ಯಂತ ವಿವಿಧ ಜಿಲ್ಲೆಗಳಲ್ಲಿ 15 ದಿವಸಗಳ ಕಾಲ ಸಂಚರಿಸಿ ಇಂದು ತಿರುವನಂತಪುರಂಗೆ ತಲುಪಲಿದೆ.
ಅಮಿತ್ ಶಾ ಕೂಡಾ ಪಾದಯಾತ್ರೆಯಲ್ಲಿ ಬಂದು ಸಮಾರೋಪ ಸಮಾರಂಭದ ಮೈದಾನವನ್ನು ಸೇರಲಿದ್ದಾರೆ. ಅವರ ಜೊತೆಗೆ ಅಖಿಲಭಾರತ ಪ್ರಧಾನ ಕಾರ್ಯದರ್ಶಿ ರಾಮ್ಲಾಲ್, ಕೇಂದ್ರ ಸಚಿವರಾದ ಅಶ್ವಿನಿಕುಮಾರ್ ಚೌಬೆ, ರಾಧಾಕೃಷ್ಣನ್ ಮೊದಲಾದವರು ಭಾಗವಹಿಸಲಿದ್ದಾರೆ.
ಪಯ್ಯನ್ನೂರಿನಲ್ಲಿ ಯಾತ್ರೆಯನ್ನು ಅಮಿತ್ಶಾ ಉದ್ಘಾಟಿಸಿದ್ದರು. ಪಿಣರಾಯಿಗೆ ಬಂದಾಗ ಅಮಿತ್ಶಾ ಜಾಥಾದಲ್ಲಿ ಪಾಲ್ಗೊಳ್ಳುವರು ಎನ್ನಲಾಗಿತ್ತು. ಆದರೆ ಕೊನೆಕ್ಷಣದಲ್ಲಿ ಅವರು ಕೇರಳದಿಂದ ವಾಪಸ್ ತೆರಳಿದ್ದರು.