ಮಂಡ್ಯ: ವ್ಯಕ್ತಿ ಆತ್ಮಹತ್ಯೆ
Update: 2017-10-17 14:00 GMT
ಮಂಡ್ಯ, ಅ.17: ತಾಲೂಕಿನ ಕಾಗೆಪುರ ಗ್ರಾಮದ ಕಾಳೇಗೌಡರ ಪುತ್ರ ಸೋಮ ಶೇಖರ್(35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ.
ವ್ಯಕ್ತಿಯೋರ್ವ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮಳವಳ್ಳಿ ಪಟ್ಟಣದ ಗಣೇಶ ಲಾಡ್ಜ್ ನಲ್ಲಿ ನಡೆದಿದೆ.
ರವಿವಾರ ಲಾಡ್ಜ್ ನಲ್ಲಿ ತಂಗಿದ್ದ ಸೋಮಶೇಖರ್ ಬೆಳಗ್ಗೆಯಾದರೂ ಕೊಠಡಿಯಿಂದ ಹೊರಬರದ ಹಿನ್ನೆಲೆಯಲ್ಲಿ ಬಾಗಿಲು ತೆರೆದು ನೋಡಿದಾಗ ಆತನ ಶವ ನೇಣುಬಿಗಿದ ರೀತಿಯಲ್ಲಿ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವಿವಾಹಿತನಾಗಿದ್ದ ಸೋಮಶೇಖರ್ ಮರದ ವ್ಯಾಪಾರಿಯಾಗಿದ್ದು, ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದೆನ್ನಲಾಗಿದ್ದು, ಪಟ್ಟಣ ಪೊಲೀಸರು ತನಿಖೆ ಕೈಗೊಂಡಿದ್ದಾರೆ.