ಬಸ್ ಡಿಪೋ ಕಟ್ಟಡದ ಛಾವಣಿ ಕುಸಿದು ಬಿದ್ದು 8 ಮಂದಿ ಮೃತ್ಯು

Update: 2017-10-20 06:00 GMT

ಚೆನ್ನೈ, ಅ.20: ತಮಿಳುನಾಡು ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ ಡಿಪೋ ಕಟ್ಟಡದ ಛಾವಣಿ ಕುಸಿದು ಬಿದ್ದು 8 ಮಂದಿ ಮೃತಪಟ್ಟ ಘಟನೆ ನಾಗಪಟ್ಟಣಂನ ಪೊರಯಾರ್ ಎಂಬಲ್ಲಿ ಸಂಭವಿಸಿದೆ.

ಕೆಲಸದ ನಂತರ ಡಿಪೋದಲ್ಲಿ ವಿಶ್ರಾಂತಿಯಲ್ಲಿದ್ದ ಬಸ್ ಚಾಲಕರು ಹಾಗು ನಿರ್ವಾಹಕರು ಮೃತಪಟ್ಟವರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೃತಪಟ್ಟವರನ್ನು ಮುನಿಯಪ್ಪನ್, ಚಂದ್ರಶೇಖರ್, ಪ್ರಭಾಕರ್, ರಾಮಲಿಂಗಂ, ಮಣಿವಣ್ಣನ್, ಧನಪಾಲ್, ಅನ್ಬರಸನ್ ಹಾಗು ಬಾಲು ಎಂದು ಗುರುತಿಸಲಾಗಿದೆ.

ವೆಂಕಟೇಶನ್, ಸೆಂದಿಲ್ ಹಾಗು ಪ್ರೇಮ್ ಕುಮಾರ್ ಎಂಬವರು ಗಾಯಗೊಂಡಿದ್ದಾರೆ. ಅವರನ್ನು ನಾಗಪಟ್ಟಣಂ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News