ಅರೂರು ಲಕ್ಷ್ಮೀರಾವ್

Update: 2017-10-20 11:38 GMT

ಕಾರ್ಕಳ, ಅ.20: ಇಲ್ಲಿನ ನೀರೆಬೈಲೂರಿನ ರಾಜಕೀಯ ಧುರೀಣ ದಿ. ಅರೂರು ಲಕ್ಷ್ಮೀ ನಾರಾಯಣ ರಾವ್ ಅವರ ಪತ್ನಿ ಆರೂರು ಲಕ್ಷ್ಮೀ ರಾವ್ (93) ಶುಕ್ರವಾರ ನೀರೆಬೈಲೂರು ಕಣಜಾರಿನಲ್ಲಿರುವ ತನ್ನ ಅಳಿಯ ಡಾ. ಬಾಲಕೃಷ್ಣ ಆಚಾರ್ಯರ ಮನೆಯಲ್ಲಿ ನಿಧನ ಹೊಂದಿದರು.
ಇವರ ನಿಧನಕ್ಕೆ ಪೇಜಾವರ ಶ್ರೀ, ಮಾಲತಿ ವೀರಪ್ಪಮೊಯ್ಲಿ, ಶಾಸಕ ಗೋಪಾಲ ಭಂಡಾರಿ, ಪತ್ರಕರ್ತ ಮನೋಹರ ಪ್ರಸಾದ್, ಸಹಿತ ಅನೇಕ ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.

ಮೃತರು ಐವರು ಪುತ್ರಿಯರು ಹಾಗೂ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಸಹಿತ 14 ಮೊಮ್ಮಕ್ಕಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ