ಶಿವದೇವಾಲಯ ಧ್ವಂಸಗೊಳಿಸಿ ತಾಜ್‌ಮಹಲ್ ನಿರ್ಮಾಣ: ಬಿಜೆಪಿ

Update: 2017-10-26 15:50 GMT

ಆಗ್ರಾ, ಅ. 26: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಾಜ್‌ಮಹಲ್ ಭೇಟಿ ನೀಡುತ್ತಿರುವ ನಡುವೆ, ಶಿವ ದೇವಾಲಯವನ್ನು ಧ್ವಂಸಗೊಳಿಸಿ ತಾಜ್‌ಮಹಲ್ ನಿರ್ಮಿಸಲಾಗಿದೆ ಎಂದು ಗುರುವಾರ ಉತ್ತರಪ್ರದೇಶ ಬಿಜೆಪಿ ಹೇಳಿದೆ.

ಮೊಗಲರು ದೇವಾಲಯವನ್ನು ಧ್ವಂಸಗೊಳಿಸಿದರು ಹಾಗೂ ತಾಜ್‌ಮಹಲ್ ನಿರ್ಮಿಸಿದರು ಎಂದು ಉತ್ತರ ಆಗ್ರಾದ ಶಾಸಕ ಜಗನ್ ಪ್ರಸಾದ್ ಗರ್ಗ್ ಹೇಳಿದ್ದಾರೆ. ತಾಜ್‌ಮಹಲ್ ಇರುವ ಜಾಗದಲ್ಲೇ ಶಿವದೇವಾಲಯ ಇತ್ತು ಎಂಬುದಕ್ಕೆ ಹಲವು ಚರಿತ್ರೆಕಾರರು ಪುರಾವೆ ಒದಗಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಆದಾಗ್ಯೂ ಬಿಜೆಪಿಗೆ ತಾಜ್‌ಮಹಲ್‌ನ ಪ್ರಾಮಖ್ಯತೆಯ ಅರಿವಿದೆ. ಇದು ಜಗತ್ತಿನ 7ನೆ ಅದ್ಭುತ. ತಾಜ್‌ಮಹಲ್‌ಗೆ ಪ್ರತಿವರ್ಷ ದಶಲಕ್ಷ ಜನರು ಭೇಟಿ ನೀಡುತ್ತಾರೆ. ಈ ಸ್ಮಾರಕದಿಂದ ಆಗ್ರಾ ಪ್ರಸಿದ್ಧಿ ಪಡೆದಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News