ಮಾಂಸಾಹಾರ ತ್ಯಜಿಸಿದ ಕೇಂದ್ರ ಸಚಿವ ಸದಾನಂದ ಗೌಡ…!

Update: 2017-11-07 06:23 GMT

ಬೆಂಗಳೂರು, ನ.7: ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಇನ್ನು ಮಾಂಸಾಹಾರ ಸೇವಿಸುವುದಿಲ್ಲವಂತೆ. ಅವರು ಸೋಮವಾರದಿಂದ ಮಾಂಸಾಹಾರ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದಾರೆ. ಈ ವಿಚಾರವನ್ನು ಸ್ವತ: ಡಿ.ವಿ.ಸದಾನಂದ ಗೌಡ ಬಹಿರಂಗಪಡಿಸಿದ್ದಾರೆ.

ರಾಜ್ಯ ರಾಜಕಾರಣಕ್ಕೆ ಮರಳಿರುವ ಮಾಜಿ ಮುಖ್ಯ ಮಂತ್ರಿ ಡಿವಿಎಸ್ ಅವರು ರಾಜ್ಯದಲ್ಲಿ ಮುಂದೆ ನಡೆಯಲಿರುವ ಚುನಾವಣೆಯನ್ನು ದೃಷ್ಠಿಯಲ್ಲಿಟ್ಟುಕೊಂಡು, ಹೆಚ್ಚು ಸಕ್ರೀಯವಾಗಿರಲು ಮಾಂಸಾಹಾರವನ್ನು ತ್ಯಜಿಸಿದರೆ ಸಾಧ್ಯ ಎಂಬ ನಿರ್ಧಾರಕ್ಕೆ ಬಂದಿರುವ ಡಿ.ವಿ.ಸದಾನಂದ ಗೌಡ ಅವರು ಸಸ್ಯಹಾರದ ಮೊರೆ ಹೋಗಿದ್ದಾರೆ.

ಡಿ.ವಿ.ಸದಾನಂದ ಗೌಡ ಅವರು ಕಳೆದ ನಾಲ್ಕೂವರೆ ದಶಕಗಳಿಂದಲೂ ದಿನನಿತ್ಯ ಮಾಂಸಾಹಾರ ದ ಊಟ ಸೇವಿಸುತ್ತಿದ್ದರು.  ಕಳೆದ ಎರಡು ತಿಂಗಳುಗಳ ಹಿಂದೆ ಮಾಂಸಾಹಾರವನ್ನು ನಿಲ್ಲಿಸುವ ನಿಟ್ಟಿನಲ್ಲಿ ಡಿವಿಎಸ್ ಯೋಚಿಸಿದ್ದರು. ಅಂದಿನಿಂದ ಮಾಂಸಾಹಾರ ಸೇವಿಸುವುದನ್ನು ಕಡಿಮೆ ಮಾಡಿದ ಡಿವಿಎಸ್ ಇದೀಗ ಸಂಪೂರ್ಣವಾಗಿ ತ್ಯಜಿಸಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News