ಬಣಕಲ್: ​ದೇವಸ್ಥಾನದ ಕಳಶ ಕಳವು

Update: 2017-11-14 17:43 GMT

ಬಣಕಲ್, ನ.14: ಕಳೆದ ತಿಂಗಳ ಬಲ್ಲಾಳರಾಯನ ದುರ್ಗದ ಶ್ರೀಕಾಲಬೈರವೇಶ್ವರ ದೇವಸ್ಥಾನದಲ್ಲಿ ವಿಗ್ರಹ ಕಳುವಾದ ಘಟನೆ ಮಾಸುವ ಮುನ್ನವೇ ರವಿವಾರ ರಾತ್ರಿ ದೇವಸ್ಥಾನದ ಪಂಚಲೋಹದ ಕಳಶ ಕಳುವಾದ ಘಟನೆ ನಡೆದಿದೆ.

ಕಳೆದ ಅ.26ರಂದು ತಡರಾತ್ರಿ ಕಳ್ಳರು ಪಂಜುರ್ಲಿಯ ವಿಗ್ರಹ, ಚಾಮುಂಡೇಶ್ವರಿಯ ವಿಗ್ರಹ ಹಾಗೂ ಕತ್ತಿ ಗುರಾಣಿ ಪಂಚಲೋಹದ ಕೋಟ್ಯಂತರ ರೂ. ಬೆಲೆ ಬಾಳುವ ವಿಗ್ರಹವನ್ನು ಕಳವು ಮಾಡಿದ್ದರು. ಅರ್ಚಕರಾದ ಜನಾದರ್ನ ಭಟ್ ಮರುದಿನ ಬೆಳಗ್ಗೆ ಪೂಜೆ ಸಲ್ಲಿಸಲು ಬಂದಾಗ ಬೀಗ ಮುರಿದು ವಿಗ್ರಹ ಕಳ್ಳತನವಾಗಿರುವುದು ಬೆಳಕಿಗೆ ಬಂದಿತು.

ಈಗ ದೇವಸ್ಥಾನದ ಕಳಶ ಕಳುವಾಗಿರುವುದರಿಂದ ಪೊಲೀಸರು ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಬಗ್ಗೆ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಪೊಲೀಸರು ಭೆೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News