ಗೋಡ್ಸೆಯ ಪ್ರತಿಮೆ ಸ್ಥಾಪನೆ: ಹಿಂದೂ ಮಹಾಸಭಾ ವಿರುದ್ಧ ಪ್ರಕರಣ ದಾಖಲು

Update: 2017-11-18 13:46 GMT

ಇಂದೋರ್, ನ.18: ಗ್ವಾಲಿಯರ್ ನ ತನ್ನ ಕಚೇರಿಯಲ್ಲಿ ಮಹಾತ್ಮಾ ಗಾಂಧೀಜಿ ಹಂತಕ ನಾಥೂರಾಮ್ ಗೋಡ್ಸೆಯ ಪ್ರತಿಮೆಯನ್ನು ಸ್ಥಾಪಿಸಿದ ಹಿಂದೂ ಮಹಾಸಭಾ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು thequint.com ವರದಿ ಮಾಡಿದೆ.

ಗ್ವಾಲಿಯರ್ ನ ದೌಲತ್ ಗಂಜ್ ನಲ್ಲಿರುವ ಕಚೇರಿಯಲ್ಲಿ ಗೋಡ್ಸೆಯ 32 ಇಂಚು ಉದ್ದದ ಪ್ರತಿಮೆಯೊಂದನ್ನು ಸ್ಥಾಪಿಸಲಾಗಿದೆ ಎಂದು ಹಿಂದೂ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷ ಜೈವೀರ್ ಭಾರಧ್ವಾಜ್ ಹೇಳಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಈ ಫೋಟೊಗಳು ವೈರಲ್ ಆದ ನಂತರ ಹಿಂದೂ ಮಹಾಸಭಾ ವಿರುದ್ಧ ಪ್ರಕರಣ ದಾಖಲಾಗಿದೆ. ಹಿಂದೂ ಮಹಾಸಭಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಕಾಂಗ್ರೆಸ್ ಆಗ್ರಹಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News