ಸರಗಳ್ಳತ ಪ್ರಕರಣ: ಅಪರಾಧಿಗೆ ಎರಡು ವರ್ಷ ಜೈಲು ಸಜೆ

Update: 2017-11-23 13:59 GMT

ಕೆಆರ್ ಪೇಟೆ, ನ.23: ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿ ಪಟ್ಟಣದ ಹಿರಿಯ ಶ್ರೇಣಿ ನ್ಯಾಯಾಲಯದ ಮೊದಲನೆ ದರ್ಜೆ ನ್ಯಾಯಿಕ ದಂಡಾಧಿಕಾರಿ ಕೆ.ಗುರುಪ್ರಸಾದ್ ತೀರ್ಪು ನೀಡಿದ್ದಾರೆ.

ಚಿತ್ರದುರ್ಗ ಮೂಲದ ತಿಪ್ಪೇಶಿ ಶಿಕ್ಷೆಗೊಳದ ಅಪರಾಧಿ ಎಂದು ಗುರುತಿಸಲಾಗಿದೆ.

ತಿಪ್ಪೇಶಿ ಕಳೆದ ವರ್ಷ ಜನವರಿ 27 ರಂದು ಮಂದಗೆರೆ ರೈಲು ನಿಲ್ದಾಣದಲ್ಲಿ ಕಿಟಕಿ ಪಕ್ಕ ಕುಳಿತಿದ್ದ ಮಂಜುಳ ಎಂಬವರ ವ್ಯಾನಿಟ್ ಬ್ಯಾಗ್ ಕಿತ್ತುಕೊಂಡಿದ್ದ, ಅದರಲ್ಲಿ ಚಿನ್ನದ ಸರವಿತ್ತು. ಈ ಬಗ್ಗೆ ಮಂಜುಳ ಮೈಸೂರು ರೈಲ್ವೆ ಪೊಲೀಸರಿಗೆ ದೂರು ನೀಡಿದ್ದರು.

ಪರಾರಿಯಾಗಿದ್ದ ತಿಪ್ಪೇಶಿಯನ್ನು ಬಂಧಿಸಿದ ರೈಲ್ವೆ ಪೊಲೀಸರು ಪಟ್ಟಣದ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಿದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ತಿಪ್ಪೇಶಿಗೆ ಜೈಲು ಶಿಕ್ಷೆ ವಿಧಿಸಿದರು.

ಸರಕಾರದ ಪರವಾಗಿ ರಾಜೇಶ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News