ಫೋಟೊ ತೆಗೆಯಲು ಯತ್ನಿಸಿದ ವ್ಯಕ್ತಿಯನ್ನು ತುಳಿದು ಕೊಂದ ಕಾಡಾನೆ

Update: 2017-11-24 11:18 GMT

ಕೊಲ್ಕತಾ, ನ. 24: ಪಶ್ಚಿಮ ಬಂಗಾಳದ ಹೆದ್ದಾರಿಯಲ್ಲಿ ಪ್ರತ್ಯಕ್ಷಗೊಂಡಿದ್ದ ಕಾಡಾನನೆಯ ಫೋಟೊ ತೆಗೆಯಲು  ಯತ್ನಿಸಿದ ವ್ಯಕ್ತಿಯನ್ನು ಆನೆ ತುಳಿದು ಅಪ್ಪಚ್ಚಿ ಮಾಡಿದೆ. ಕೊಲ್ಕತಾದ ಜಲ್‍ಪೆಯ್ಗುರಿ ಬ್ಯಾಂಕ್‍ನ ಭದ್ರತಾ ಉದ್ಯೋಗಿ ಸಾದಿಕ್ ರಹ್ಮಾನ್(40) ಮೃತಪಟ್ಟಿರುವ ವ್ಯಕ್ತಿ. ಘಟನೆ ಲತ್ತಾಗುರಿ ಕಾಡಿನ ಬದಿಯಲ್ಲಿ ಗುರುವಾರ ಸಂಜೆ ನಡೆದಿದೆ.

ಪ್ರಯಾಣದ ನಡುವೆ ಅನಿರೀಕ್ಷಿತವಾಗಿ ಸಾದಿಕ್ ಮಾರ್ಗದಲ್ಲಿ ಆನೆಯನ್ನು ನೋಡಿದ್ದರು.  ಆನೆ ರಸ್ತೆ ದಾಟಿ ಹೋಗಲು ಅನುವಾಗುವಂತೆ ವಾಹನಗಳನ್ನು ನಿಲ್ಲಿಸಲಾಗಿತ್ತು. ಈ ವೇಳೆ ಕಾರಿನಿಂದ ಇಳಿದ ಸಾದಿಕ್ ಫೋಟೊ ತೆಗೆಯಲು ಯತ್ನಿಸಿದ್ದಾರೆ. ಈ ವೇಳೆ ಕೆರಳಿದ ಆನೆ

ಸಾದಿಕ್‍ರನ್ನು ತುಳಿದು ಅಪ್ಪಚ್ಚಿ ಮಾಡಿದೆ. ನಂತರ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾದಿಕ್  ಮೃತಪಟ್ಟಿದ್ದರು. ಪಶ್ಚಿಮ ಬಂಗಾಳ  ಸರಕಾರದ ಲೆಕ್ಕದಂತೆ ಕಳೆದವರ್ಷ ಪಶ್ಚಿಮಬಂಗಾಳದಲ್ಲಿ 84 ಮಂದಿ ಅನೆತುಳಿತಕ್ಕೊಳಗಾಗಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News