ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನು ವಿಶ್ವವೇ ಗೌರವಸುತ್ತಿದೆ : ಯಂಗವೇಲು

Update: 2017-12-07 05:26 GMT

ಹನೂರು,ಡಿ.7: ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನು ವಿಶ್ವವೇ ಗೌರವಸುತ್ತಿದೆ ಎಂದು ಆಟೋ ಚಾಲಕರ ಸಂಘದ ಅದ್ಯಕ್ಷರಾದ ಯಂಗವೇಲು ತಿಳಿಸಿದರು.

ಹನೂರು ಸಮೀಪದ  ರಾಮಾಪುರದಲ್ಲಿ ಆಟೋ ನಿಲ್ದಾಣದಲ್ಲಿ  ಆಯೋಜಿಸಿದ್ದ  ಡಾ.ಬಾಬಾ ಸಾಹೇಬ್ ಪರಿನಿರ್ವಾಣ ದಿನದ ಅಂಗವಾಗಿ ಬಾಬಾ ಸಾಹೇಬ್ ಭಾವಚಿತ್ರಕ್ಕೆ ಪುಷ್ಪಲಂಕಾರ ಮಾಡಿ ಅನಂತರ ಮಾತನಾಡಿದ ಅವರು ಅಂಬೇಡ್ಕರ್‍ರವರು ಭಾರತ ದೇಶದಲ್ಲಿ ಇರುವ ಜಾತಿ ತಾರತಮ್ಯದ ವಿರುದ್ದ ಅವಿರತ ಹೋರಾಟವನ್ನು ಮಾಡಿದರು. ಅವರು ಒಂದು ಜಾತಿ ಸಮುದಾಯಕ್ಕೆ ಸೀಮಿತವಾಗಿ ಸಂವಿಧಾನ ರಚನೆ ಮಾಡಿಲ್ಲ, ಎಲ್ಲಾ ಜಾತಿ ಧರ್ಮದವರಿಗೆ ಅನುಕೂಲವಾಗುವ ಸಂವಿಧಾನವನ್ನು ರಚನೆ ಮಾಡಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ನಾಗರಾಜು, ಡಾ.ಅಂಬೇಡ್ಕರ್ ರಾಮಪುರ ಅದ್ಯಕ್ಷರಾದ ಸುಂದರೇಶ್ ಬ್ಲಾಕ್ ಮಟ್ಟದ ಸಂಘದ ಉಪಾದ್ಯಕ್ಷರಾದ ಮಣಿಮುತ್ತು, ಕಾರ್ಯದರ್ಶಿ ರಾಜೇಂದ್ರ, ಸದಸ್ಯರುಗಳಾದ ಮಾದೇಶ್ ಶರವಣ, ಚಂಡಿಮಾದು ಇನ್ನಿತರರು ಹಾಜರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News