ರವಿಬೆಳಗೆರೆ ಪೊಲೀಸ್ ಜೀಪಿನಲ್ಲಿ ಸಿಗರೇಟ್ ಸೇದಿದ್ದು ತಪ್ಪು: ಗೃಹ ಸಚಿವ ರಾಮಲಿಂಗಾ ರೆಡ್ಡಿ

Update: 2017-12-11 06:35 GMT

ಬೆಂಗಳೂರು, ಡಿ.11: ಪತ್ರಕರ್ತ  ಸುನಿಲ್ ಹೆಗ್ಗರವಳ್ಳಿ ಕೊಲೆಗೆ  ಸುಪಾರಿ ನೀಡಿದ ಆರೋಪ ಎದುರಿಸುತ್ತಿರುವ ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿ ಬೆಳಗೆರೆ ಪೊಲೀಸ್ ಜೀಪಿನಲ್ಲಿ ಸಿಗರೇಟ್ ಸೇದಿದ್ದು ತಪ್ಪು ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆರೋಪಿ ಪೊಲೀಸ್ ಕಸ್ಟಡಿಯಲ್ಲಿರುವಾಗ ಸಿಗರೇಟ್ ಸೇದಲು ಅವಕಾಶವಿಲ್ಲ.ಆದರೆ ರವಿಬೆಳೆಗೆರೆ ಹಠ ಹಿಡಿದು ಪೊಲೀಸ್ ಜೀಪ್ ನಲ್ಲಿ  ಸಿಗರೇಟ್ ಸೇದಿದ್ದನ್ನು ನಾನು ನೋಡಿದ್ದೇನೆ. ಅವರಿಗೆ ಸಿಗರೇಟ್ ಸೇದಲು ಅವಕಾಶ ನೀಡಿದ ಪೊಲೀಸರಲ್ಲಿ ಈ ವಿಚಾರದ ಬಗ್ಗೆ ಮಾತನಾಡುತ್ತೇನೆ.

ರವಿಬೆಳಗೆರೆಗೆ ಜಾಮೀನು ನೀಡುವುದು ನ್ಯಾಯಾಲಯಕ್ಕೆ ಬಿಟ್ಟ ವಿಚಾರ ಎಂದು ಗೃಹಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News