ರವಿಬೆಳೆಗೆರೆ ವಿಚಾರಣೆ 1 ಗಂಟೆಗೆ ಮುಂದೂಡಿಕೆ
Update: 2017-12-11 07:13 GMT
ಬೆಂಗಳೂರು, ಡಿ.11: ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿದ ಆರೋಪ ಎದುರಿಸುತ್ತಿರುವ ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿ ಬೆಳಗೆರೆ ಅವರನ್ನು ಸಿಸಿಬಿ ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ,
ರವಿ ಬೆಳಗೆರೆ ಅವರನ್ನು ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಸಿಸಿಬಿ ಪೊಲೀಸರು ಹಾಜರುಪಡಿಸಿದಾಗ ನ್ಯಾಯಾಧೀಶರು ವಿಚಾರಣೆಯನ್ನು ಮಧ್ಯಾಹ್ನ 1 ಗಂಟೆಗೆ ಮುಂದೂಡಿದರು.
ವಿಚಾರಣೆಯನ್ನು ಅರ್ಧ ಗಂಟೆ ಮುಂದೂಡಿದ ನ್ಯಾಯಾಧೀಶ್ ಜಗದೀಶ್ ಅವರು ವಿಚಾರಣೆ ಮುಗಿದ ಬಳಿಕ ರವಿಬೆಳೆಗೆರೆ ಅವರಿಗೆ ಜಾಮೀನು ಅಥವಾ ನ್ಯಾಯಾಂಗ ಬಂಧನ ನೀಡುವ ಬಗ್ಗೆ ನಿರ್ಧರಿಸಲಿದ್ದಾರೆ.