ದಾವಣಗೆರೆ : ಕೊಲೆ ಆರೋಪಿಯ ಬಂಧನ

Update: 2017-12-11 12:34 GMT

ದಾವಣಗೆರೆ,ಡಿ.11 : ಹಣಕ್ಕಾಗಿ ತನ್ನ ಚಿಕ್ಕಮ್ಮನನ್ನೆ ಕೊಲೆಗೈದಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಸಂದೀಪ್ (26) ಬಂಧಿತ ಆರೋಪಿ.ಡಿ8 ರಂದು ನಗರದ ಟಿಸಿ ಲೇಔಟ್ ನಲ್ಲಿ ವಿಶಾಲಾಕ್ಷಿ (42) ಎಂಬ ಮಹಿಳೆಯನ್ನು ಹಣದ ವಿಚಾರಕ್ಕಾಗಿ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು.

ಈ ಪ್ರಕರಣವನ್ನು ಬೇಧಿಸಿದ ಪೊಲೀಸರು ಆರೋಪಿ ಸಂದೀಪ್ ನನ್ನು ಬಂಧಿಸಿದ್ದಾರೆ. ಈತ ಕೊಲೆಯಾದ ವಿಶಾಲಾಕ್ಷಮ್ಮ ಅವರ ಪತಿ ಬಸವರಾಜ್ ಅವರ ಸಹೋದರನ ಪುತ್ರ. ಕೊಲೆಗೈದು ತಲೆ ಮರೆಸಿಕೊಂಡಿದ್ದ ಸಂದೀಪ್ ನನ್ನು ಸಂಬಂಧಿಕರ ಮನೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ವಿಪರೀತ ಸಾಲ ಮಾಡಿಕೊಂಡಿದ್ದ ಸಂದೀಪ್ ಹಣಕ್ಕಾಗಿ ಈ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.  ಆಜಾದ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News