ಹೆಗ್ಗೋಡು ಪ್ರಸನ್ನಗೆ ಕರ್ನಾಟಕ ನಾಟಕ ಅಕಾಡಮಿಯ ಜೀವಮಾನ ಗೌರವ ಪ್ರಶಸ್ತಿ

Update: 2017-12-11 13:55 GMT

ಬೆಂಗಳೂರು, ಡಿ.11: ಕರ್ನಾಟಕ ನಾಟಕ ಅಕಾಡಮಿಯ 2017ನೇ ಸಾಲಿನ ಜೀವಮಾನ ಗೌರವ ಪ್ರಶಸ್ತಿಗೆ ಹಿರಿಯ ರಂಗಕರ್ಮಿ ಹೆಗ್ಗೋಡು ಪ್ರಸನ್ನ ಪಾತ್ರರಾಗಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅಕಾಡಮಿ ಅಧ್ಯಕ್ಷ ಜೆ.ಲೋಕೇಶ್, ಅಕಾಡಮಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹಿರಿಯ ರಂಗಕರ್ಮಿ ಹೆಗ್ಗೋಡು ಪ್ರಸನ್ನರನ್ನು 2017ನೆ ಸಾಲಿನ ಜೀವಮಾನ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಪ್ರಶಸ್ತಿಯು 50 ಸಾವಿರ ರೂ.ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ ಎಂದು ವಿವರಿಸಿದರು.

ವಾರ್ಷಿಕ ರಂಗಪ್ರಶಸ್ತಿ: ಮೈಸೂರಿನ ಮಂಡ್ಯ ರಮೇಶ್(ನಟ, ನಿರ್ದೇಶಕ), ಎಸ್.ಎಸ್.ಗಾಯಿತ್ರಿ(ನಟಿ, ಪೌರಾಣಿಕ), ದಕ್ಷಿಣ ಕನ್ನಡದ ಕೃಷ್ಣಮೂರ್ತಿ ಕವತ್ತಾರು(ನಟ, ನಿರ್ದೇಶಕ), ಚಿಕ್ಕಬಳ್ಳಾಪುರದ ಕೆ.ರಾಮಕೃಷ್ಣಯ್ಯ(ನಟ), ಬೆಂಗಳೂರಿನ ನಾಗಿಣಿ ಭರಣ(ವಸ ವಿನ್ಯಾಸಕಿ), ಎಲ್.ಎನ್.ಮುಕುಂದರಾಜ್(ಸಂಘಟಕ, ನಾಟಕಕಾರ), ನಾಗೇಶ್ ಕಶ್ಯಪ್(ನಟ, ನಿರ್ದೇಶಕ), ಕೆ.ರೇವಣ್ಣ(ನಟ, ಸಂಘಟಕ), ಕಮಲ ವಿ.ರಾವ್(ನೇಪಥ್ಯ, ವಸವಿನ್ಯಾಸಕಿ), ಉಡುಪಿಯ ದಯಾನಂದ ಶೆಟ್ಟಿ (ವೃತ್ತಿ ರಂಗಭೂಮಿ), ತುಮಕೂರಿನ ಭೋಗ ನರಸಿಂಹ(ವೃತ್ತಿ ರಂಗಭೂಮಿ), ಮರಿಯಮ್ಮನಹಳ್ಳಿಯ ಡಿ.ಹನುಮಕ್ಕ(ಹವ್ಯಾಸಿ ನಟಿ), ಬಾಗಲಕೋಟೆಯ ಶಾರದ ಅರವಿಂದ ರಾಸೂರು(ವೃತ್ತಿ ರಂಗಭೂಮಿ, ನಟಿ), ರಂಗಪ್ಪ ಲ.ಕಟಗೇರಿ(ಅಣ್ಣಪ್ಪ) (ವೃತ್ತಿ ರಂಗಭೂಮಿ, ನಟ), ಹಾಸನದ ಉಲಿವಾಲ ಮೋಹನ್‌ಕುಮಾರ್(ನಟ, ಸಂಘಟಕ), ಕಲಬುರಗಿಯ ಗುರುನಾಥ್ ಬಿ.ಹೂಗಾರ್(ನಟ, ನೇಪಥ್ಯ), ಬಳ್ಳಾರಿಯ ಎಂ.ಪಂಪಣ್ಣ ಕೊಗಳಿ(ವೃತ್ತಿರಂಗಭೂಮಿ, ನಿರ್ದೇಶಕ), ರಾಯಚೂರಿನ ವೆಂಕಟೇಶ್ ಅಲ್ಕೋಡ್(ರಂಗ ಸಂಗೀತ), ಜಮಖಂಡಿಯ ಮಹದೇವ ಎಂ.ಗುಟ್ಲಿ(ಪ್ರಸಿದ್ಧ ಸೀ ಪಾತ್ರಧಾರಿ ನಟ), ಧಾರವಾಡದ ಚಂದ್ರಶೇಖರ ಜಿಗಜಿನ್ನಿ(ನಟ, ನಿರ್ದೇಶಕ), ವಿಜಯಪುರದ ಸುರೇಖಾ ತಾಳೀಕೋಟೆ(ವೃತ್ತಿ ರಂಗಭೂಮಿ ನಟಿ), ಚಿಕ್ಕಮಗಳೂರಿನ ಬಿ.ರವಿಕುಮಾರ್(ನಟ, ನಿರ್ದೇಶಕ), ಮಂಡ್ಯದ ಎಸ್.ಸೋಮಶೇಖರಯ್ಯ(ವೃತ್ತಿ ರಂಗಭೂಮಿ, ನಟ), ತುಮಕೂರಿನ ಕಲ್ಕರೆ ನರಸಿಂಹಮೂರ್ತಿ(ಪೌರಾಣಿಕ, ಹಾರ್ಮೋನಿಯಂ), ರಾಮನಗರದ ಮಂಚೇಗೌಡ(ನೇಪಥ್ಯ) ಇವರಿಗೆ ಅಕಾಡೆಮಿಯ ವಾರ್ಷಿಕ ರಂಗ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯು 25 ಸಾವಿರ ರೂ. ನಗದು ಒಳಗೊಂಡಿದೆ.

ಅಕಾಡೆಮಿಯ ದತ್ತಿ ಪ್ರಶಸ್ತಿಗಳು: ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪ್ರಶಸ್ತಿಗೆ ರಂಗ ಧಾರವಾಡದ ನಿರ್ದೇಶಕ ಬಸವರಾಜ ಬೆಂಗೇರಿ ಹಾಗೂ ಕಲ್ಚರ್ಡ್‌ ಕೆಮೆಡಿಯನ್ ಕೆ.ಹಿರಣ್ಣಯ್ಯ ದತ್ತಿ ಪ್ರಶಸ್ತಿಗೆ ಹಾಸನದ ನಟ ಚೌಡಪ್ಪ ದಾಸ್ ಆಯ್ಕೆಯಾಗಿದ್ದಾರೆ. ಕೆ.ರಾಮಚಂದ್ರಯ್ಯ ದತ್ತಿನಿಧಿ ಪುರಸ್ಕಾರಕ್ಕೆ ಭದ್ರಾವತಿಯ ನೇಪಥ್ಯ ಕಲಾವಿದ ಮಾಯಿಗಯ್ಯ ಆಯ್ಕೆಯಾಗಿದ್ದರೆ, ಬಾಗಲಕೋಟೆಯ ವೃತ್ತಿರಂಗಭೂಮಿ ನಟಿ ಮನೋರಂಜನ ಸಿಂಧೆ ಅವರಿಗೆ ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪ್ರಶಸ್ತಿ ಸಿಕ್ಕಿದೆ. ಈ ಪ್ರಶಸ್ತಿಗಳು ತಲಾ 5 ಸಾವಿರ ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರವನ್ನೊಳಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News