ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಮಸ್ಕತ್‌ಗೆ ಭೇಟಿ

Update: 2017-12-11 14:37 GMT

ಬೆಂಗಳೂರು, ಡಿ. 11: ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರು ಡಿ.19ರ ವರೆಗೆ ಕೊಲ್ಲಿ ಪ್ರವಾಸದಲ್ಲಿದ್ದು, ಅವರು ಇತ್ತೀಚೆಗೆ ಅಲ್ಲಿನ ಅನಿವಾಸಿ ಕನ್ನಡಿಗರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿ ಆರತಿ ಕೃಷ್ಣ, ರಾಜ್ಯ ಸರಕಾರ ಇತ್ತೀಚೆಗೆ ಜಾರಿಗೆ ತಂದಿರುವ ಅನಿವಾಸಿ ಭಾರತೀಯ ನೀತಿ ಕುರಿತ ಮಾಹಿತಿಯನ್ನು ಅಲ್ಲಿನ ಕನ್ನಡಿಗರ ಗಮನಕ್ಕೆ ತಂದರು. ಈ ನೀತಿಯಲ್ಲಿನ ಅನಿವಾಸಿ ಕನ್ನಡಿಗರ ಕಲ್ಯಾಣ ಕಾರ್ಯಕ್ರಮಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದು ಮನವರಿಕೆ ಮಾಡಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News