ಸಾಲದಿಂದ ಬಾಧೆ : ಪ್ರಾಂಶುಪಾಲ ಆತ್ಮಹತ್ಯೆ

Update: 2017-12-11 15:10 GMT

ಮೈಸೂರು,ಡಿ.11: ಸಾಲದ ಹೊರೆಗೆ ಬೇಸತ್ತ ಪ್ರಾಂಶುಪಾಲರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ  ಮೈಸೂರಿನ ಹೆಬ್ಬಾಳು ಬಡಾವಣೆಯ ಮೊದಲ ಹಂತದಲ್ಲಿ ನಡೆದಿದೆ.

ಮೃತರನ್ನು ಶಿಲ್ಪಾ ತಿಮ್ಮಯ್ಯ (37) ಎಂದು ಗುರುತಿಸಲಾಗಿದೆ. ಕಲ್ಯಾಣಗಿರಿಯಲ್ಲಿ ಟೀಚರ್ಸ್ ಟ್ರೈನಿಂಗ್ ಸಂಸ್ಥೆ ನಡೆಸುತ್ತಿದ್ದ ಇವರು  ಏಕಾಂಗಿ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಹೆಬ್ಬಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News