ಚಿನ್ನದ ಸರ ಅಪಹರಣ : ಇಬ್ಬರು ಮಹಿಳೆಯರ ಬಂಧನ

Update: 2017-12-11 17:15 GMT

ನಾಗಮಂಗಲ, ಡಿ.11: ನಾಗನಕೆರೆ ಗಿಡಜಾತ್ರೆಯಲ್ಲಿ ಮಹಿಳೆಯೋರ್ವಳಿಗೆ  ತಲೆಸವರಿ ಮತ್ತುಭರಿಸಿ 30 ಗ್ರಾಂ ಚಿನ್ನದ ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.

ಮೈಸೂರು ಜಿಲ್ಲೆಯ ಹುಣಸೂರಿನ ಸರೋಜ (40) ಮತ್ತು ಶಿವಮ್ಮ(42) ಎಂಬುವರು ಬಂಧಿತರು. ಡಿ.8 ರಂದು  ನಡೆದ ತಾಲೂಕಿನ ದೇವಲಾಪುರ ಹೋಬಳಿಯ ಗಿಡದಜಾತ್ರೆ ಎಂದೇ ಪ್ರಸಿದ್ದವಾದ ನಾಗನಕೆರೆ ಗಿಡಜಾತ್ರೆಯಲ್ಲಿ ಇವರು ಮಂಡ್ಯ ತಾಲೂಕು ಕೆರಗೋಡು ಹೋಬಳಿ ಹಂಪಾಪುರದ ಪಲ್ಲವಿ ಅವರಿಂದ ಸರ ಅಪಹರಿಸಿ ಪರಾರಿಯಾಗಿದ್ದರು.

ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡಿವೈಎಸ್‍ಪಿ ಧರ್ಮೇಂದ್ರರವರ ಮಾರ್ಗದರ್ಶನದಂತೆ ಸಿಪಿಐ ಧನರಾಜ್ ನೇತೃತ್ವದಲ್ಲಿ  ಪಿಎಸ್‍ಐ ಚಿದಾನಂದ್ ಮತ್ತು ತಂಡ ಖಚಿತ ಮಾಹಿತಿ ಆಧರಿಸಿ ನಾಗಮಂಗಲ ಪಟ್ಟಣದಲ್ಲಿದ್ದ ಮಹಿಳೆಯರನ್ನು ರವಿವಾರ ಬಂಧಿಸಿದರು. ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News