ಚಿರತೆ ದಾಳಿಗೆ 1ಕರು ಸೇರಿ 4 ಆಡಿನ ಮರಿ ಬಲಿ

Update: 2017-12-12 12:33 GMT

ಗುಂಡ್ಲುಪೇಟೆ, ಡಿ. 12: ಚಿರತೆ ದಾಳಿಯಿಂದಾಗಿ 4 ಆಡಿನ ಮರಿ ಹಾಗೂ 1 ಕರು ಸಾವನ್ನಪ್ಪಿದ ಘಟನೆ ನಡೆದಿದೆ. ತಾಲೂಕಿನ ಗುರುವಿನಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ರಾಜಪ್ಪ ಎಂಬುವವರ 2 ಆಡಿನ ಮರಿ ಹಾಗೂ ಮಹೇಶ ಎಂಬುವವರಿಗೆ ಸೇರಿದ 2 ಆಡಿನ ಮರಿ ಮಲ್ಲಪ್ಪರವರ ಒಂದು ಕರುವನ್ನು ಚಿರತೆ ದಾಳಿ ಮಾಡಿ ತಿಂದು ಮುಗಿಸಿದೆ.

ಕಳೆದ ಮೂರು ದಿನಗಳಿಂದ ಗ್ರಾಮದ ಸುತ್ತಾಮುತ್ತಾ ಚಿರತೆ ಕಾಣಿಸಿಕೊಂಡಿದ್ದು ಅನಾಹುತ ಸಂಭವಿಸುವ ಮುನ್ನ ಚಿರತೆ ಸೆರೆಗೆ ಬೋನು ಇಡುವಂತೆ ಗ್ರಾಮಸ್ಥರು ಬಂಡೀಪುರದ ಅರಣ್ಯ ಇಲಾಖೆಗೆ ತಿಳಿಸಿದ್ದಾರೆ. ಆದರೂ ಕೂಡ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇಲ್ಲ ಎಂದು ತಾತ್ಸಾರ ಮಾಡಿದ್ದಾರೆ. ಪರಿಣಾಮವಾಗಿ ಕುಟುಂಬಕ್ಕೆ ಆಧಾರವಾಗಿದ್ದ ಬಡ ರೈತರ ಸಾಕುಪ್ರಾಣಿಗಳು ಬಲಿಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News