ಕಪ್ಪುಹಣ ಬಿಳುಪು: ಆರೋಪಿ ಮೊಯಿನ್ ಅಖ್ತರ್ಗೆ ಜಾಮೀನು
Update: 2017-12-12 16:33 GMT
ಹೊಸದಿಲ್ಲಿ,ಡಿ.12: ಕಪ್ಪುಹಣ ಬಿಳುಪು ಪ್ರಕರಣದಲ್ಲಿ ಬಂಧಿತನಾಗಿದ್ದ ಮಾಂಸ ರಫ್ತು ವ್ಯಾಪಾರಿ ಮೊಯಿನ್ ಅಖ್ತರ್ ಖುರೈಷಿಗೆ ದಿಲ್ಲಿಯ ನ್ಯಾಯಾಲಯವೊಂದು ಮಂಗಳವಾರ ಜಾಮೀನು ಬಿಡುಗಡೆ ನೀಡಿದೆ.
ಎರಡು ಲಕ್ಷ ರೂ. ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತದ ಖಾತರಿ ಹಣವನ್ನು ಪಾವತಿಸಿದ ಬಳಿಕ ವಿಶೇಷ ನ್ಯಾಯಾಧೀಶರು ಖುರೈಷಿಯನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಿದ್ದಾರೆ.
ಖುರೈಷಿಯನ್ನು ಜಾರಿ ನಿರ್ದೇಶನಾಲಯವು ಆಗಸ್ಟ್ 25ರಂದು ಬಂಧಿಸಿತ್ತು. ತೆರಿಗೆಗಳ್ಳತನ ಹಾಗೂ ಅಕ್ರಮ ವಿದೇಶಿ ವಿನಿಮಯ ಅವ್ಯಹಾರದ ಆರೋಪಗಳಿಗೆ ಸಂಬಂಧಿಸಿ ಕಪ್ಪುಹಣ ಬಿಳುಪು ತಡೆ ಕಾಯ್ದೆಯಡಿ ಆತನ ವಿರುದ್ಧ ಪ್ರಕರಣ ದಾಖಲಿಸಿತ್ತು.