ರಾಜ್ಯಸಭೆಯಿಂದ ಅನರ್ಹ: ಹೈಕೋರ್ಟ್ ಮೆಟ್ಟಿಲೇರಿದ ಶರದ್ ಯಾದವ್
Update: 2017-12-12 18:00 GMT
ಹೊಸದಿಲ್ಲಿ, ಡಿ. 12: ರಾಜ್ಯಸಭೆಯಿಂದ ತನ್ನನ್ನು ಅನರ್ಹಗೊಳಿಸಿರುವುದನ್ನು ತಳ್ಳಿ ಹಾಕುವಂತೆ ಕೋರಿ ಜೆಡಿಯುನ ಮಾಜಿ ಅಧ್ಯಕ್ಷ ಶರದ್ ಯಾದವ್ ದಿಲ್ಲಿ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ತನ್ನ ವಿರುದ್ಧ ಆದೇಶ ಜಾರಿಗೊಳಿಸುವ ಮುನ್ನ ಸಂಬಂಧಿತರು ತನಗೆ ಯಾವುದೇ ಅವಕಾಶ ನೀಡಿಲ್ಲ ಎಂದು ಯಾದವ್ ಮನವಿಯಲ್ಲಿ ಹೇಳಿದ್ದಾರೆ.
ಡಿಸೆಂಬರ್ 4ರಂದು ಯಾದವ್ ಹಾಗೂ ಇನ್ನೊರ್ವ ಸಂಸದ ಅಲಿ ಅನ್ವರ್ ಅವರನ್ನು ರಾಜ್ಯ ಸಭೆಯಿಂದ ಅನರ್ಹಗೊಳಿಸಲಾಗಿತ್ತು.
ಕಳೆದ ವರ್ಷ ಜುಲೈಯಲ್ಲಿ ಜೆಡಿಯು ಅಧ್ಯಕ್ಷ ಹಾಗೂ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಹಾರದಲ್ಲಿ ಆರ್ಜೆಡಿ ಹಾಗೂ ಕಾಂಗ್ರೆಸ್ನ ಮಹಾಮೈತ್ರಿ ಕಡಿದುಕೊಂಡು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಬಳಿಕ ಯಾದವ ಪ್ರತಿಪಕ್ಷಗಳ ಪಾಳೇಯ ಸೇರಿದ್ದರು.