ಚುನಾವಣಾ ಆಯೋಗಕ್ಕೆ ಲಂಚ ಪ್ರಕರಣ : ಪೂರಕ ಆರೋಪ ಪಟ್ಟಿಯಲ್ಲಿ ದಿನಕರನ್ ಹೆಸರು
Update: 2017-12-14 14:47 GMT
ಹೊಸದಿಲ್ಲಿ, ಡಿ. 14: ಚುನಾವಣಾ ಆಯೋಗಕ್ಕೆ ಲಂಚ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರು ನಗರ ನ್ಯಾಯಾಲಯಕ್ಕೆ ಗುರುವಾರ ಸಲ್ಲಿಸಿದ ಹೆಚ್ಚುವರಿ ಆರೋಪ ಪಟ್ಟಿಯಲ್ಲಿ ಎಐಎಡಿಎಂಕೆ (ಅಮ್ಮಾ) ನಾಯಕ ಟಿಟಿವಿ ದಿನಕರನ್ ಅವರನ್ನು ಆರೋಪಿ ಎಂದು ಹೆಸರಿಸಲಾಗಿದೆ.
272 ಪುಟಗಳ ಆರೋಪ ಪಟ್ಟಿ ಸ್ವೀಕರಿಸಿರುವ ಹೆಚ್ಚುವರಿ ಸತ್ರ ನ್ಯಾಯಾಧೀಶ ಕಿರಣ್ ಬನ್ಸಾಲ್, ಇದರ ವಿಚಾರಣೆಯನ್ನು ಡಿಸೆಂಬರ್ 21ರಂದು ನಡೆಸಲಿದ್ದಾರೆ. ದಿನಕರನ್ ಅಲ್ಲದೆ ಮಧ್ಯವರ್ತಿ ಎಂದು ಹೇಳಲಾದ ಸುಖೇಶ್ ಚಂದ್ರಶೇಖರ್, ದಿನಕರನ್ ಅವರ ದೀರ್ಘಕಾಲದ ಗೆಳೆಯ ಮಲ್ಲಿಕಾರ್ಜುನ ಹಾಗೂ ಇತರ ಆರು ಮಂದಿಯ ಹೆಸರು ಈ ಆರೋಪ ಪಟ್ಟಿಯಲ್ಲಿ ಇದೆ.
ಈ ವರ್ಷ ಜುಲೈಯಲ್ಲಿ ಪೊಲೀಸರು ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ದಿನಕರನ್ ಅವರ ಹೆಸರನ್ನು ಉಲ್ಲೇಖಿಸಿರಲಿಲ್ಲ.