ರಾಮಚಂದ್ರಾಪುರ ಮಠ ಅವಹೇಳನ ಆರೋಪ: ಇಬ್ಬರ ಬಂಧನ

Update: 2017-12-16 16:49 GMT

ಸಾಗರ, ಡಿ.16: ಸಾಮಾಜಿಕ ಜಾಲತಾಣದಲ್ಲಿ ರಾಮಚಂದ್ರಾಪುರ ಮಠವನ್ನು ಅಶ್ಲೀಲ ಹಾಗೂ ಅವಹೇಳನಕಾರಿಯಾಗಿ ಬಿಂಬಿಸಿ ಸಂದೇಶಗಳನ್ನು ಹಾಕಿಕೊಂಡಿದ್ದ ಆರೋಪದಲ್ಲಿ ಇಬ್ಬರನ್ನು ಸಾಗರ ಗ್ರಾಮಾಂತರ ಠಾಣೆಯ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಬಂಧಿತರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಗಣಪತಿ ಭಟ್ ಜಿಗಳೆಮನೆ, ನಿರಂಜನ ಕುಗ್ವೆ ಎಂದು ತಿಳಿದು ಬಂದಿದೆ.

‘ಫೇಸ್‌ಬುಕ್‌ನ ಸತ್ಯ ಶೋಧ ಮಿತ್ರ ಮಂಡಳಿ’ ಎಂಬ ಗ್ರೂಪ್ ಅಡ್ಮಿನ್ ಆಗಿರುವ ಗಣಪತಿ ಭಟ್, ರಾಮಚಂದ್ರಾಪುರ ಮಠವನ್ನು ಅಶ್ಲೀಲವಾಗಿ ಬಿಂಬಿಸಿ ಅವಹೇಳನಕರ ಸಂದೇಶಗಳನ್ನು ಹಾಕಿದ್ದರು ಎನ್ನಲಾಗಿದೆ. ಇದನ್ನು ಗಮನಿಸಿದ್ದ ಮಹಿಳೆಯೊಬ್ಬರು ಸಾಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ಪೊಲೀಸರು ಸೆ.13ರಂದು ಇಬ್ಬರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News