ಕುಪ್ವಾರ: ಸೇನೆಯ ಗುಂಡಿಗೆ ಟ್ಯಾಕ್ಸಿ ಚಾಲಕ ಬಲಿ

Update: 2017-12-17 06:51 GMT

ಜಮ್ಮು ಕಾಶ್ಮೀರ, ಡಿ.17: ಕಾರ್ಯಾಚಾರಣೆಯೊಂದರ ಸಂದರ್ಭ ಸೈನಿಕರ ಗುಂಡಿಗೆ ಟ್ಯಾಕ್ಸಿ ಚಾಲಕನೊಬ್ಬ ಬಲಿಯಾದ ಘಟನೆ ಉತ್ತರ ಕಾಶ್ಮೀರದ ಕುಪ್ವಾರದಲ್ಲಿ ಸಂಭವಿಸಿದೆ.

ರೋಗಿಗಳನ್ನು ಆಸ್ಪತ್ರೆಗೆ ಒಯ್ಯಲು ಟ್ಯಾಕ್ಸಿ ಚಾಲಕ ಆಸಿಫ್ ಅಬ್ದುಲ್ ಮನೆಯಿಂದ ಹೊರಬಂದಿದ್ದಾರೆ. ಈ ಸಂದರ್ಭ ಯಾವುದೇ ಸೂಚನೆ ನೀಡದೆ ಗುಂಡಿಕ್ಕಲಾಗಿದೆ ಎಂದು ಆಸಿಫ್ ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ ಸೇನೆಯ ಮೂಲಗಳು ಇದನ್ನು ನಿರಾಕರಿಸಿದ್ದು, ಸೂಚನೆ ನೀಡಿದ್ದರೂ ಅವರು ಹೊರಬಂದಿದ್ದರು. ಆದ್ದರಿಂದ ಗುಂಡಿಕ್ಕಲಾಗಿದೆ ಎಂದಿದೆ.

ಗುಂಡೇಟು ತಿಂದಿದ್ದ ಆಸಿಫ್ ರನ್ನು ಆಸ್ಪತ್ರೆಯ ಸಾಗಿಸುವ ಸಂದರ್ಭ ಅವರು ಮೃತಪಟ್ಟಿದ್ದಾರೆ. ಉಗ್ರಗಾಮಿಗಳ ಚಲನವಲನಗಳ ಬಗ್ಗೆ ಮಾಹಿತಿ ಲಭಿಸಿದ್ದರಿಂದ ಸೇನೆಯು ಕಾರ್ಯಾಚರಣೆ ನಡೆಸುತ್ತಿತ್ತು. ಕುಪ್ವಾರ ಜಿಲ್ಲೆಯ ಕ್ರಾಲ್ ಪೋರಾದಲ್ಲಿ ಉಗ್ರಗಾಮಿಗಳು ಅಡಗಿಕೊಂಡಿದ್ದಾರೆ ಎನ್ನುವ ಮಾಹಿತಿ ಸೇನೆಗೆ ಲಭಿಸಿತ್ತು.

ಈ ಬಗ್ಗೆ ಸೇನೆಯು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News