ಕೂಚ್ ಬಿಹಾರ್ ಟ್ರೋಫಿ: ಅರ್ಜುನ್ ತೆಂಡುಲ್ಕರ್‌ಗೆ 5 ವಿಕೆಟ್ ಗೊಂಚಲು

Update: 2017-12-19 18:51 GMT

ಮುಂಬೈ, ಡಿ.19: ಕೂಚ್ ಬಿಹಾರ್ ಟ್ರೋಫಿಯಲ್ಲಿ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ರೈಲ್ವೇಸ್ ತಂಡದ ವಿರುದ್ಧ ಮುಂಬೈ ಪರ 5 ವಿಕೆಟ್ ಗೊಂಚಲು ಪಡೆದು ಗಮನ ಸೆಳೆದಿದ್ದಾರೆ.

  ಎರಡನೇ ಇನಿಂಗ್ಸ್‌ನಲ್ಲಿ ಅರ್ಜುನ್ ಉತ್ತಮ ಬೌಲಿಂಗ್ ದಾಳಿ ನೆರವಿನಿಂದ ಮುಂಬೈ ತಂಡ ರೈಲ್ವೇಸ್‌ನ್ನು ಇನಿಂಗ್ಸ್ ಹಾಗೂ 103 ರನ್‌ಗಳಿಂದ ಸೋಲಿಸಿದೆ. ಅರ್ಜುನ್ ಕೇವಲ 20 ದಿನಗಳ ಹಿಂದೆ ಮಧ್ಯಪ್ರದೇಶ ವಿರುದ್ಧ ಐದು ವಿಕೆಟ್ ಹಾಗೂ ಅಸ್ಸಾಂ ವಿರುದ್ಧ 4 ವಿಕೆಟ್ ಕಬಳಿಸಿದ್ದರು.

ಮುಂಬೈನ ಮೊದಲ ಇನಿಂಗ್ಸ್‌ನಲ್ಲಿ ಎಡಗೈ ಆಲ್‌ರೌಂಡರ್ ಅರ್ಜುನ್ 21 ರನ್ ಗಳಿಸಿದ್ದರು. ಮುಂಬೈ ಮೊದಲ ಇನಿಂಗ್ಸ್‌ನಲ್ಲಿ 389 ರನ್ ಗಳಿಸಿದ್ದು, ಇದಕ್ಕೆ ಉತ್ತರವಾಗಿ ರೈಲ್ವೇಸ್ 150 ರನ್‌ಗೆ ಆಲೌಟಾಗಿತ್ತು. ಫಾಲೋಆನ್‌ಗೆ ಸಿಲುಕಿದ ರೈಲ್ವೇಸ್ ಎರಡನೇ ಇನಿಂಗ್ಸ್‌ನಲ್ಲಿ 136 ರನ್‌ಗೆ ಆಲೌಟಾಯಿತು. 44 ರನ್‌ಗೆ 5 ವಿಕೆಟ್ ಕಬಳಿಸಿದ ಅರ್ಜುನ್ ರೈಲ್ವೇಸ್ ಹಳಿ ತಪ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News