ಸದಾನಂದ ಆಳ್ವ
Update: 2017-12-24 15:07 GMT
ಮಂಗಳೂರು, ಡಿ.24: ನಗರದ ಜಪ್ಪಿನಮೊಗರು ನಿವಾಸಿ ತಿರುವೈಲು ಗುತ್ತು ಸದಾನಂದ ಆಳ್ವ (77) ಶನಿವಾರ ತಡರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರು ಪತ್ನಿ, ಕಾರ್ಪೊರೇಟರ್ ಪ್ರವೀಣ್ ಚಂದ್ರ ಆಳ್ವ ಸಹಿತ ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿ ಹಾಗೂ ಅಪಾರ ಕುಟುಂಬಸ್ಥರನ್ನು ಅಗಲಿದ್ದಾರೆ.
ಕೆಇಬಿ ನಿವೃತ್ತ ಅಧಿಕಾರಿಯಾಗಿದ್ದ ಮೃತರು ಜಪ್ಪಿನಮೊಗರು ಬಂಟರ ಸಂಘದ ಗೌರವ ಸಲಹೆಗಾರರಾಗಿ ಹಾಗೂ ವಿವಿಧ ಸಾಮಾಜಿಕ, ಧಾರ್ಮಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದರು.