ಪ್ರತ್ಯೇಕ ರಸ್ತೆ ಅಪಘಾತ: ಇಬ್ಬರು ಮೃತ್ಯು

Update: 2018-01-01 13:07 GMT

ಗುಂಡ್ಲುಪೇಟೆ: ಜ.1: ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಬೈಕ್ ಸವಾರರು ಮೃತಪಟ್ಟ ಘಟನೆ ನಡೆದಿದೆ.

ಡಿ 31ರ ರಾತ್ರಿ ತಾಲೂಕಿನ ಬೆಟ್ಟಹಳ್ಳಿ ಗ್ರಾಮದ ಮಹೇಶ್ ಎಂಬುವರು ಅಣ್ಣುರುಕೇರಿ ಬಳಿ ಹೋಗುತ್ತಿದ್ದಾಗ ಎದುರು ಬರುತ್ತಿದ್ದ ಬೈಕಿಗೆ ಮುಖಾಮುಖಿ ಢಿಕ್ಕಿಯಾಗಿ ಅಂಕಹಳ್ಳಿ ಗ್ರಾಮದ ಸದಾನಂದ(25) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ತೀವ್ರ ಪೆಟ್ಟು ಬಿದ್ದಿರುವ ಮಹೇಶ್‍ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಜ 1ರಂದು ಮಧ್ಯಾಹ್ನ ತಾಲೂಕಿನ ಭೀಮನಬೀಡು ಸಮೀಪದ ಕೇರಳ ಮೂಲದ ಕಾರು-ಬೈಕ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಕಗ್ಗಳದಹುಂಡಿ ಗ್ರಾಮದ ನಿವಾಸಿ ನಾಗರಾಜು(38) ಎಂದು ಗುರುತಿಸಲಾಗಿದೆ. ಈ ಬಗ್ಗೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News