ಸಿಗ್ನಲ್ ಜಂಪ್ ಮಾಡಿದಕ್ಕಾಗಿ ಇಬ್ಬರಿಗೆ ಪ್ರೊಬೆಷನರಿ ಪಿಎಸ್ ಐ ಥಳಿತ
ಕೊಪ್ಪಳ, ಜ.5: ಸಿಗ್ನಲ್ ಜಂಪ್ ಮಾಡಿದ್ದಕ್ಕಾಗಿ ಬೈಕ್ ಸವಾರರಿಬ್ಬರ ಮೇಲೆ ಪ್ರೊಬೆಷನರಿ ಪಿಎಸ್ಐ ಒಬ್ಬರು ಥಳಿಸಿದ ಘಟನೆ ಕೊಪ್ಪಳದ ನಗರ ಠಾಣೆಯಲ್ಲಿ ನಡೆದಿದೆ.
ಗವಿಸಿದ್ದೇಶ್ವರ ಮಠದ ಜಾತ್ರೆ ಡಿ.30ರಿಂದ ಆರಂಭಗೊಂಡಿದ್ದು, ಶುಕ್ರವಾರ ಕೊನೆಯ ದಿನವಾಗಿದೆ. ಈ ಜಾತ್ರೆಯ ಬಂದೋಬಸ್ತ್ ಗೆ ಬಂದಿದ್ದ ಪಿಎಸ್ ಐ ಅವರು ಯುವಕರನ್ನು ಪೊಲೀಸ್ ಠಾಣೆಗೆ ಕರೆ ತಂದು ಅವರಿಗೆ ಬೆಲ್ಟ್ ನಲ್ಲಿ ಥಳಿಸಿದರು ಎಂದು ತಿಳಿದು ಬಂದಿದೆ.
ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬರು ಥಳಿಸಿರುವ ವೀಡಿಯೊ ಇದೀಗ ಸಾಮಾಜಿಕ ಜಾಲಾ ತಾಣಗಳಲ್ಲಿ ವೈರಲ್ ಆಗಿದೆ.
ಗವಿಮಠದ ಗವಿಸಿದ್ದೇಶ್ವರ ಜಾತ್ರೆಯ ಬಂದೋಬಸ್ತ್ ಗೆ ಬಂದಿದ್ದ ಪ್ರೊಬೆಷನರಿ ಪಿಎಸ್ ಐ ಅವರು ಯುವಕರನ್ನು ಕರೆ ತಂದು ಥಳಿಸಿದರು ಎನ್ನಲಾಗಿದೆ.
ಪಿಎಸ್ ಐ ಯವಕರಿಗೆ ಥಳಿಸುತ್ತಿದ್ದಾಗ ಪೊಲೀಸ್ ಸಿಬ್ಬಂದಿಗಳು ಅವರಿಗೆ ಪ್ರೋತ್ಸಾಹ ನೀಡುತ್ತಿರುವ ಮೂಲಕ ಅಮಾನವೀಯವಾಗಿ ವರ್ತಿಸಿರುವುದು ವೀಡಿಯೊದಲ್ಲಿದೆ. ಯುವಕರಿಗೆ ಥಳಿಸಿದ ಪ್ರೊಬೆಷನರಿ ಪಿಎಸ್ ಐ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.