ರಮೇಶ್

Update: 2018-01-13 15:02 GMT

ಶಿವಮೊಗ್ಗ, ಜ.13: ಸಾಗರ ನಗರ ಸರ್ಕಲ್ ಇನ್ಸ್‍ಪೆಕ್ಟರ್ ರಮೇಶ್ (51) ಹೃದಯಾಘಾತದಿಂದ ಇಂದು ನಿಧನರಾದರು.  ಇಂದು ಮುಂಜಾನೆ ತೀವ್ರ ಹೃದಯಾಘಾತಕ್ಕೊಳಗಾದ ಅವರನ್ನು ಶಿವಮೊಗ್ಗಕ್ಕೆ ಕರೆತುರವಾಗ ದಾರಿ ಮಧ್ಯೆ ಸಾವಿಗೀಡಾಗಿದ್ದಾರೆ. 

ನಗರದ ಡಿಎಆರ್ ಆವರಣದಲ್ಲಿ ಇಲಾಖೆಯ ವತಿಯಿಂದ ಮೃತರಿಗೆ ಅಂತಿಮ ನಮನ ಸಲ್ಲಿಸಲಾಯಿತು. ಮೂಲತಃ ಬಳ್ಳಾರಿಯವರಾದ ಮಹೇಶ್ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಹಾಗೂ ಕಾರ್ಗಲ್ ಠಾಣೆಯಲ್ಲಿ ಸಬ್‍ಇನ್ಸ್‍ಪೆಕ್ಟರ್ ಆಗಿ ಕೆಲಸ ನಿರ್ವಹಿಸಿ ಕಳೆದ ವರ್ಷವಷ್ಟೇ ಇನ್ಸ್‍ಪೆಕ್ಟರ್ ಆಗಿ ಬಡ್ತಿಗೊಂಡು ಸಾಗರ ನಗರ ವೃತ್ತಕ್ಕೆ ನಿಯೋಜನೆಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ