ಅಂಗವಿಕಲರಿಗೆ ತರಬೇತಿ

Update: 2018-01-16 15:38 GMT

ಉಡುಪಿ, ಜ.16: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲ ಚೇತನರ ಸಬಲೀಕರಣ ಇಲಾಖೆಯಿಂದ ಉಡುಪಿ ಜಿಲ್ಲಾ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಮೂಲಕ ಜ.20ರಂದು ಶ್ರವಣದೋಷವುಳ್ಳವರಿಗೆ ಸನ್ನೆ ಮೂಲಕ ಸಂವಾದ ಕಾರ್ಯಕ್ರಮ ಹಾಗೂ ಜ.21ರಂದು ದೃಷ್ಠಿದೋಷವುಳ್ಳವರಿಗೆ ಬ್ರೈಲ್ ಬರವಣಿಗೆ, ಚಲನ ವಲನ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮ ಜ.20ಮತ್ತು 21ರಂದು ಬೆಳಿಗ್ಗೆ 10ಕ್ಕೆ ಅಜ್ಜರಕಾಡಿನಲ್ಲಿರುವ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯಲ್ಲಿ ನಡೆಯಲಿದೆ. ಇದರಲ್ಲಿ ಶ್ರವಣ ಮತ್ತು ದೃಷ್ಠಿದೋಷವುಳ್ಳವರು ಮತ್ತುಅವರ ಪೋಷಕರು ವಿಕಲಚೇತನರ ಸ್ವಯಂಸೇವಾ ಸಂಸ್ಥೆಯ ಪ್ರತಿನಿಧಿಗಳು ಹಾಗೂ ವಿಶೇಷ ಶಾಲೆಯ ಶಿಕ್ಷಕರು ಭಾಗವಹಿಸುವಂತೆ ರೆಡ್‌ಕ್ರಾಸ್ ಸಂಸ್ಥೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News