ಸಂಘ ಪರಿವಾರದಿಂದ ನಾನು ಸಾಕಷ್ಟು ನೋವು ಅನುಭವಿಸಿದ್ದೇನೆ: ಪ್ರಮೋದ್ ಮುತಾಲಿಕ್

Update: 2018-01-17 07:29 GMT

ವಿಜಯಪುರ, ಜ.17: ಸಂಘ ಪರಿವಾರದಿಂದ ನಾನು ಸಾಕಷ್ಟು ನೋವನ್ನು ಅನುಭವಿಸಿದ್ದೇನೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನಾನು ಕಾರಣಕರ್ತನಾಗಿದ್ದೆ. ಆದರೆ ಬಿಜೆಪಿ ನನ್ನನ್ನು ಹೀನಾಯವಾಗಿ ನಡೆಸಿಕೊಂಡಿತು. ಹಿಂದೂ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದವರು ಇಂದು ತೊಗಾಡಿಯಾರನ್ನು ಹತ್ತಿಕ್ಕುವ, ಎನ್ ಕೌಂಟರ್ ನಡೆಸುವ ಮಟ್ಟಕ್ಕೆ ತಲುಪಿದ್ದಾರೆ. ಇದು ಅತ್ಯಂತ ಭಯಾನಕವಾದ ಪರಿಸ್ಥಿತಿ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದರು.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಪ್ರವೀಣ್ ತೊಗಾಡಿಯಾ ವಿಚಾರದಲ್ಲಿ ಆಘಾತಕಾರಿ ಘಟನೆಗಳು ನಡೆದಿವೆ. ಈ ಹಿಂದೆ ಹಿಂದೂ ಹೋರಾಟಗಾರರನ್ನು, ನೇತಾರರನ್ನು , ಸಂಘಟಕರನ್ನು ಹತ್ತಿಕ್ಕುವ ಯತ್ನಗಳು ನಡೆದಿತ್ತು. ಅದೆಲ್ಲವನ್ನೂ ನಾವು ಎದುರಿಸಿದ್ದೆವು. ಆದರೆ ಇಂದು ಸಂಘಪರಿವಾರದೊಳಗೆ ಇಂತಹ ಯತ್ನಗಳು ನಡೆಯುತ್ತಿವೆ ಎಂದವರು ಹೇಳಿದರು.

ಹಿಂದೂ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದವರು ಇಂದು ತೊಗಾಡಿಯಾರನ್ನು ಹತ್ತಿಕ್ಕುವ, ಎನ್ ಕೌಂಟರ್ ನಡೆಸುವ ಮಟ್ಟಕ್ಕೆ ತಲುಪಿದ್ದಾರೆ. ಇದು ಇಡೀ ಹಿಂದೂ ಸಮಾಜಕ್ಕೆ ನಾಚಿಕೆಗೇಡಿನ ಸಂಗತಿ ಎಂದು ಮುತಾಲಿಕ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News