ಸಾಲ ಬಾಧೆ: ವ್ಯಕ್ತಿ ಆತ್ಮಹತ್ಯೆ

Update: 2018-01-17 11:55 GMT

ಕಡೂರು, ಜ.17: ಮಗಳ ಮದುವೆಗೆ ಮಾಡಿಕೊಂಡಿದ್ದ ಸಾಲದ ಮರುಪಾವತಿ ಸಾದ್ಯವಾಗದ ಹಿನ್ನೆಲೆಯಲ್ಲಿ ಮನನೊಂದು ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಡೂರು ಪೊಲೀಸ್ ಠಾಣೆ ವ್ಯಾಪ್ತಿಯ ತಂಗಲಿ ಗ್ರಾಮದಲ್ಲಿ ನಡೆದಿದೆ.

ಮೃತನನ್ನು ರಂಗಸ್ವಾಮಿ(52) ಎಂದು ಗುರುತಿಸಲಾಗಿದೆ. ಅವರು ತಂಗಲಿ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡು ನಮ್ಮ ಸಂಸಾರ ಸಮೇತ ವಾಸವಾಗಿದ್ದರು. ಮಗಳು ಶೋಭಾಳನ್ನು ಸುಮಾರು 2 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು, ಆ ಸಮಯದಲ್ಲಿ ಕೆಲವು ಪರಿಚಯಸ್ಥರು ಮತ್ತು ಸ್ನೇಹಿತರ ಬಳಿ ಕೈಸಾಲ ಮಾಡಿಕೊಂಡಿದ್ದರು. ಇತ್ತೀಚೆಗೆ ಮಳೆ ಸರಿಯಾಗಿ ಬಾರದೇ ಇದ್ದುದ್ದರಿಂದ, ಕೂಲಿ ಕೆಲಸ ಸಹ ಸರಿಯಾಗಿ ಸಿಗದಿದ್ದ ಹಿನ್ನೆಲೆಯಲ್ಲಿ ಸಾಲ ಮರುಪಾವತಿ ಸಾದ್ಯವಾಗಿರಲಿಲ್ಲ.ಈ ವಿಚಾರದಲ್ಲಿ ನೊಂದಿದ್ದ ರಂಗಸ್ವಾಮಿ ಸಾಲದ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡು ಮನೆಯಲ್ಲಿ ಯಾರೂ ಇಲ್ಲ ದಿರುವ ಸಮಯದಲ್ಲಿ ವಿಷ ಸೇವಿಸಿ ಅಸ್ವಸ್ಥರಾಗಿದ್ದರು. ತಕ್ಷಣ ಅವರನ್ನು ಪತ್ನಿ ಮಂಜುಳ ಹಾಗೂ ಮಗಳು ಅನಿತಾ ಕಡೂರು ಸರ್ಕಾರಿ ಅಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಪಲಕಾರಿಯಾಗದೆ ರಂಗಸ್ವಾಮಿ ಮೃತಪಟ್ಟಿದ್ದಾರೆ.

ಈ ಕುರಿತು ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News